ADVERTISEMENT

ಚಾಲುಕ್ಯರ ಕಾಲದ ಐಹೊಳೆಯ 8 ದೇವಸ್ಥಾನಗಳ ಸಂರಕ್ಷಣೆ ಹೊಣೆ ಧರ್ಮಸ್ಥಳ ಟ್ರಸ್ಟ್‌ಗೆ

ಎಚ್‌.ಕೆ.ಪಾಟೀಲ ಮಾಹಿತಿ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2024, 7:34 IST
Last Updated 5 ಮಾರ್ಚ್ 2024, 7:34 IST
<div class="paragraphs"><p>ಚಾಲುಕ್ಯರ ಐಹೊಳೆ ಸ್ಮಾರಕ</p></div>

ಚಾಲುಕ್ಯರ ಐಹೊಳೆ ಸ್ಮಾರಕ

   

ಬೆಂಗಳೂರು: ಬಾದಾಮಿ ತಾಲೂಕಿನ ಐಹೊಳೆಯ 8 ದೇವಸ್ಥಾನಗಳ ದುರಸ್ತಿ ಮತ್ತು ಸಂರಕ್ಷಣೆ ಜವಾಬ್ದಾರಿಯನ್ನು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋತ್ಥಾನ ಟ್ರಸ್ಟ್‌ಗೆ ವಹಿಸಲಾಗುವುದು ಎಂದು ಪ್ರವಾಸೋದ್ಯಮ ಸಚಿವರೂ ಆಗಿರುವ ಎಚ್‌.ಕೆ.ಪಾಟೀಲ ತಿಳಿಸಿದರು.

ಚಾಲುಕ್ಯರ ಕಾಲದ ಈ ದೇವಸ್ಥಾನಗಳನ್ನು ಸ್ಥಳೀಯರು ಹಸು, ಎಮ್ಮೆಗಳನ್ನು ಕಟ್ಟಿಕೊಳ್ಳಲು ಬಳಸುತ್ತಿದ್ದರು. ಇನ್ನೂ ಕೆಲವು ದೇವಸ್ಥಾನಗಳಲ್ಲಿ ಕುಟುಂಬಗಳು ವಾಸವಿದ್ದವರು. ಅವರಿಗೆ ಪರ್ಯಾಯ ವಸತಿ ವ್ಯವಸ್ಥೆ ಮಾಡಲಾಗುತ್ತಿದೆ. ವಸತಿ ನಿರ್ಮಾಣಕ್ಕಾಗಿ ಭೂಮಿ ಖರೀದಿಸಲು ₹3.30 ಕೋಟಿ ನೀಡಲಾಗುವುದು ಎಂದು ಅವರು ತಿಳಿಸಿದರು.

ADVERTISEMENT

ಐಹೊಳೆಯಲ್ಲಿ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಲು ಕೆಎಸ್‌ಟಿಡಿಸಿ ವತಿಯಿಂದ ತ್ರೀಸ್ಟಾರ್‌ ಹೊಟೇಲ್‌ ನಿರ್ಮಿಸಲಾಗುವುದು. ಇದಕ್ಕಾಗಿ ಭೂಮಿ ನೀಡಲಾಗಿದೆ ಎಂದು ಪಾಟೀಲ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.