ADVERTISEMENT

ಪಡಿತರ ವಿತರಣೆ: ಬಳ್ಳಾರಿ ಪ್ರಥಮ, ಕೊಡಗು ದ್ವಿತೀಯ; ಹಾಸನ ಕೊನೆ

ಶೇ 56 ಗ್ರಾಹಕರಿಗೆ ಪಡಿತರ ವಿತರಣೆ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2020, 2:06 IST
Last Updated 9 ಏಪ್ರಿಲ್ 2020, 2:06 IST
ರೇಷನ್ ಕಾರ್ಡ್
ರೇಷನ್ ಕಾರ್ಡ್   
""

ಬಳ್ಳಾರಿ: ಕೋವಿಡ್–‌ 19 ನಿಯಂತ್ರಣದ ಹಿನ್ನೆಲೆಯಲ್ಲಿ ಏಪ್ರಿಲ್‌ ಮತ್ತು ಮೇ ತಿಂಗಳ ಪಡಿತರವನ್ನು ಏಳು ದಿನದಲ್ಲಿ ಅತಿ ಹೆಚ್ಚು (ಶೇ56) ಮಂದಿಗೆ ವಿತರಿಸಿರುವ ಬಳ್ಳಾರಿ, ರಾಜ್ಯದಲ್ಲೇ ಮೊದಲ ಸ್ಥಾನ ಪಡೆದಿದೆ. ಕೊಡಗು ಎರಡನೇ ಸ್ಥಾನದಲ್ಲಿದ್ದು. ಮಂಡ್ಯ ಮೂರನೇ ಸ್ಥಾನದಲ್ಲಿದೆ. ಹಾಸನ (ಶೇ 18) ಕೊನೇ ಸ್ಥಾನದಲ್ಲಿದೆ.

‘ಸಾಕಷ್ಟು ಪೂರ್ವಸಿದ್ಧತೆಯೊಂದಿಗೆ ವಿತರಣೆ ಆರಂಭಿಸಿದ್ದರಿಂದ ಜಿಲ್ಲೆಯು ಮೊದಲ ಸ್ಥಾನ ಪಡೆಯಲು ಸಾಧ್ಯವಾಗಿದೆ’ ಎಂದು ಆಹಾರ ಇಲಾಖೆಯ ಜಂಟಿ ನಿರ್ದೇಶಕ ಕೆ.ರಾಮೇಶ್ವರಪ್ಪ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT