ADVERTISEMENT

ರೇಣುಕಾಚಾರ್ಯಗೆ ಪಾಠ ಮಾಡಿದ ಜಿಲ್ಲಾಧಿಕಾರಿ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2020, 7:06 IST
Last Updated 29 ಮಾರ್ಚ್ 2020, 7:06 IST
   

ದಾವಣಗೆರೆ: ಹೊನ್ನಾಳಿ ಬಿಟ್ಟು ದಾವಣಗೆರೆಗೆ ಬಂದು ಜಾಗೃತಿ ಮೂಡಿಸುವುದಾಗಿ ತಿರುಗಾಡುತ್ತಿದ್ದ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಅವರಿಗೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಪಾಠ ಮಾಡಿದರು.

ಹೊನ್ನಾಳಿ ಬಿಟ್ಟು ಯಾಕೆ ಬಂದ್ರಿ. ಬರಬೇಡಿ ಅಂದ್ರೂ ಕೇಳುತ್ತಿಲ್ಲವಲ್ಲ ನೀವು ಎಂದು ಹೇಳಿದರು.

ಮೇಯರ್ ಅಜಯ್ ಕುಮಾರ್ ಕಡೆ ತಿರುಗಿದ ಜಿಲ್ಲಾಧಿಕಾರಿ, 'ಯಾಕ್ರಿ ಕರೆಸಿದ್ದೀರಿ. ನೀವು ಇಲ್ಲಿರಬೇಕು. ಅವರು ಅಲ್ಲಿರಬೇಕು. ಸುತ್ತಾಡಬಾರದು. ನಿಮ್ಮನ್ನು ಮನೆಯಲ್ಲಿ ಕೂಡಿ ಹಾಕಬೇಕು. ಆಗ ಸರಿಯಾಗ್ತದೆ" ಎಂದು ದಬಾಯಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.