ADVERTISEMENT

ಡಿ.ಕೆ.ಶಿವಕುಮಾರ್ ನೀವಿನ್ನೂ ಅಧಿಕೃತ ಕೆಪಿಸಿಸಿ ಅಧ್ಯಕ್ಷರಲ್ಲ: ಆರ್.ಅಶೋಕ್

​ಪ್ರಜಾವಾಣಿ ವಾರ್ತೆ
Published 27 ಮೇ 2020, 10:40 IST
Last Updated 27 ಮೇ 2020, 10:40 IST
ಸಚಿವ ಆರ್.ಅಶೋಕ್ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್
ಸಚಿವ ಆರ್.ಅಶೋಕ್ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್    

ದಾವಣಗೆರೆ:ಡಿ. ಕೆ. ಶಿವಕುಮಾರ್ ಎಲ್ಲೆಂದರಲ್ಲಿ ಬಂದು ಜೇಬಲ್ಲಿ ಕೈ ಹಾಕುತ್ತಾರೆ.ಎಲ್ಲದಕ್ಕು ನಾನು ಕೊಡುತ್ತೇನೆ ಎನ್ನುತ್ತಾರೆ. ಅವರದ್ದು ಆಡಂಬರ, ಇದು ಹುಡುಗಾಟಿಕೆ ಎಂದು ಸಚಿವ ಆರ್. ಅಶೋಕ್ ಟಾಂಗ್ ನೀಡಿದ್ದಾರೆ.

ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಅವರೆನೀವು ಎಲ್ಲೆಂದರಲ್ಲಿ ಬಂದು ಜೇಬಲ್ಲಿ ಕೈ ಹಾಕುವುದು ಬೇಡ. ಅದಕ್ಕಾಗಿ ನಮ್ಮ ಸರ್ಕಾರ ಕ್ರಮಕೈಗೊಂಡಿದೆನೀವು ಹಿಂದೆ ಕೊಟ್ಟ ಚೆಕ್ ನ್ನು ನಮ್ಮವರು ಇನ್ನು ಸ್ವೀಕರಿಸಿಲ್ಲ.
ನೀವು ಇನ್ನು ಕೆಪಿಸಿಸಿ ಅಧ್ಯಕ್ಷರಾಗಿಲ್ಲ. ಅಧ್ಯಕ್ಷರಾದ ಮೇಲೆ ನೀವು ಚೆಕ್ ಗೆ ಸಹಿ ಮಾಡಲು ಅರ್ಹರು ಎಂದು ಹೇಳಿಕೆ ನೀಡಿದ್ದಾರೆ.

ಟೀಕೆಗಳಿಂದ ಕೊರೊನಾ ಹೋಗಲ್ಲ.ಕೊರೊನಾ ನಿಯಂತ್ರಣಕ್ಕೆ ಒಗ್ಗಟ್ಟಿಂದ ಹೋರಾಡೋಣ ಎಂದು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.