ADVERTISEMENT

ಬಾಲಕೃಷ್ಣ ಬೇಕಿದ್ದರೆ ಮಾತೃ ಪಕ್ಷಕ್ಕೆ ಹೋಗಲಿ: ಡಿ.ಕೆ. ಸುರೇಶ್‌

​ಪ್ರಜಾವಾಣಿ ವಾರ್ತೆ
Published 14 ಮೇ 2020, 16:41 IST
Last Updated 14 ಮೇ 2020, 16:41 IST
ಸಂಸದ ಡಿ.ಕೆ. ಸುರೇಶ್
ಸಂಸದ ಡಿ.ಕೆ. ಸುರೇಶ್   

ರಾಮನಗರ: ‘ಮಾಜಿ ಶಾಸಕ ಎಚ್‌.ಸಿ. ಬಾಲಕೃಷ್ಣ ಬೇಕಿದ್ದರೆ ಅವರ ಮಾತೃ ಪಕ್ಷಕ್ಕೆ ಹೋಗಲಿ. ಇದರಿಂದ ಕಾಂಗ್ರೆಸ್‌ಗೆ ನಷ್ಟವೇನಿಲ್ಲ’ ಎಂದು ಸಂಸದ ಡಿ.ಕೆ. ಸುರೇಶ್ ತಿರುಗೇಟು ನೀಡಿದರು.

ತಾಲ್ಲೂಕಿನ ಲಕ್ಷ್ಮೀಪುರದಲ್ಲಿ ಗುರುವಾರ ಮಾತನಾಡಿದ ಅವರು, ‘ನಾನು ಯಾರನ್ನೂ ಕಡೆಗಣಿಸಿಲ್ಲ. ನಾನು ಅವರನ್ನು ಕಡೆಗಣಿಸಿದ್ದೇನೆ ಎಂದು ಏಕೆ ಹೇಳಿದ್ದಾರೋ ಗೊತ್ತಿಲ್ಲ‌. ಕಾಂಗ್ರೆಸ್‌ನ ಎಲ್ಲ ಮುಖಂಡರು, ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಮುನ್ನಡೆದಿದ್ದೇನೆ. ಬಾಲಕೃಷ್ಣರಿಗೆ ಅಸಮಾಧಾನ ಇದ್ದರೆ ಅವರು ಸಿದ್ದರಾಮಯ್ಯ ಹಾಗು ಡಿ.ಕೆ.ಶಿವಕುಮಾರ್ ಬಳಿ ಚರ್ಚೆ ಮಾಡಲಿ. ಈ ಬಗ್ಗೆ ಮೊನ್ನೆ ಸಹ ಅವರೊಡನೆ ಮಾತನಾಡಿದ್ದೇನೆ. ಅವರ ಸಹೋದರ ಸಹ ನನ್ನ ಪಕ್ಕದಲ್ಲೇ ಇಂದು ಇದ್ದಾರೆ’ ಎಂದು ಟಾಂಗ್ ನೀಡಿದರು.

‘ಬಿಡದಿಯಲ್ಲಿ ಭೂಸ್ವಾಧೀನ ವಿಚಾರಕ್ಕೆ ಸಂಬಂಧಿಸಿ ನಾನು ಈಗಾಗಲೇ ಮುಖ್ಯಮಂತ್ರಿ ಜೊತೆ ಮಾತನಾಡಿದ್ದೇನೆ. ಯೋಜನೆ ಅನನುಕೂಲಗಳ ಬಗ್ಗೆ ವಿವರಿಸಿದ್ದೇನೆ’ ಎಂದರು.

ADVERTISEMENT

ಜೆಡಿಎಸ್ ಶಾಸಕ ಎ.ಮಂಜುನಾಥ್‌, ಜೆಡಿಎಸ್ ಮುಖಂಡರೂ ಸಂಸದರ ಜೊತೆಗೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.