ADVERTISEMENT

ಸಕಲೇಶಪುರದಲ್ಲಿ ಆನೆ ಹಿಂಡು ಪ್ರತ್ಯಕ್ಷ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2019, 8:37 IST
Last Updated 12 ಆಗಸ್ಟ್ 2019, 8:37 IST
   

ಹಾಸನ: ತಾಲ್ಲೂಕಿನ ‌ಸಕಲೇಶಪುರದಲ್ಲಿ ಮೂರು ಮರಿಯಾನೆ‌ ಸೇರಿ 13 ಆನೆಗಳು ಕಾಫಿ ತೋಟಕ್ಕೆ ನುಗ್ಗಿವೆ.

ಆನೆ ಹಿಂಡನ್ನು ಕಾಡಿನತ್ತಕಳುಹಿಸಲು ಅರಣ್ಯ ಸಿಬ್ಬಂದಿ ಹಾಗೂ ಸ್ಥಳೀಯರು ಹರಸಾಹಸ ಪಡುತ್ತಿದ್ದಾರೆ.

ತಾಲ್ಲೂಕಿನ ಹೊಂಕರವಳ್ಳಿ ಬಳಿ ಹಲಸಿನ ಮರಗಳನ್ನೇ ಮುರಿದು ಆನೆಗಳು ನುಗ್ಗಿದ್ದು, ಅವುಗಳನ್ನು ಹಿಮ್ಮೆಟ್ಟಿಸಲು ಅರಣ್ಯ ಸಿಬ್ಬಂದಿ ಪಟಾಕಿ ಸಿಡಿಸಿದರು.

ADVERTISEMENT

ಅಟ್ಟಣಿಗೆ ಮೂಲಕ ಸ್ಥಳೀಯರು ಕಾಡಾನೆ ಹಿಂಡಿನ ದೃಶ್ಯಗಳನ್ನು ಸೆರೆ ಹಿಡಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.