ADVERTISEMENT

ನಮಗೆ ಇರುವುದೊಂದೇ ಭೂಮಿ, ಜನಸಂಖ್ಯಾ ಸ್ಫೋಟ ನಿಲ್ಲಿಸೋಣ: ಸುಧಾಕರ್‌ ಮನವಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಜುಲೈ 2021, 9:11 IST
Last Updated 11 ಜುಲೈ 2021, 9:11 IST
ಕೆ. ಸುಧಾಕರ್‌
ಕೆ. ಸುಧಾಕರ್‌   

ಬೆಂಗಳೂರು: ಮಿತಿಮೀರಿ ಏರಿಕೆಯಾಗುತ್ತಿರುವ ಜಾಗತಿಕ ಜನಸಂಖ್ಯೆಯ ಬಗ್ಗೆ ಕಳವಳ ವ್ಯಕ್ತಪಡಿಸಿ ಆರೋಗ್ಯ ಸಚಿವ ಡಾ. ಕೆ.ಸುಧಾಕರ್‌ ಭಾನುವಾರ ಟ್ವೀಟ್‌ ಮಾಡಿದ್ದಾರೆ.

'ಮೊದಲ ನೂರು ಕೋಟಿ ತಲುಪಲು ಸಾವಿರಾರು ವರ್ಷ ಬೇಕಾಯಿತು! ನೂರರಿಂದ 700 ಕೋಟಿ ತಲುಪಲು ಕೇವಲ 200 ವರ್ಷಗಳು ಬೇಕಾಯಿತು! ನಮಗೆ ಇರುವುದೊಂದೇ ಭೂಮಿ, ನಿಯಂತ್ರಣವಿಲ್ಲದ ಜನಸಂಖ್ಯಾ ಸ್ಫೋಟ ನಿಲ್ಲಿಸೋಣ' ಎಂದು ಮನವಿ ಮಾಡಿದ್ದಾರೆ.

ಜುಲೈ 11ರಂದು ವಿಶ್ವ ಜನಸಂಖ್ಯಾ ದಿನ ಎಂದು ಆಚರಿಸಲಾಗುತ್ತದೆ. ಪ್ರಪಂಚದ ಒಟ್ಟು ಜನಸಂಖ್ಯೆಯು 800 ಕೋಟಿಯತ್ತ ಸಾಗಿದೆ. ಚೀನಾ ಹಾಗೂ ಭಾರತದಲ್ಲಿ ಕ್ರಮವಾಗಿ 140 ಕೋಟಿ ಮತ್ತು 130 ಕೋಟಿಗಿಂತ ಹೆಚ್ಚು ಜನಸಂಖ್ಯೆ ಇದ್ದು, ಅತಿಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರಗಳ ಸಾಲಿನಲ್ಲಿ ಮೊದಲೆರೆಡು ಸ್ಥಾನಗಳಲ್ಲಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.