ADVERTISEMENT

ಶಿವಮೊಗ್ಗ, ಚಿಕ್ಕಮಗಳೂರು ಭಾಗದಲ್ಲಿ ಭಾರಿ ಶಬ್ಧ, ಕಂಪನದ ಅನುಭವ

​ಪ್ರಜಾವಾಣಿ ವಾರ್ತೆ
Published 21 ಜನವರಿ 2021, 17:53 IST
Last Updated 21 ಜನವರಿ 2021, 17:53 IST
ಜನರು ಮನೆಯಿಂದ ಹೊರ ಬಂದಿದ್ದಾರೆ.
ಜನರು ಮನೆಯಿಂದ ಹೊರ ಬಂದಿದ್ದಾರೆ.   

ಶಿವಮೊಗ್ಗ/ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ, ಕೊಪ್ಪ ಹಾಗೂ ಶಿವಮೊಗ್ಗ ಭಾಗದಲ್ಲಿ ರಾತ್ರಿ 10.20ರ ಸಮಯದಲ್ಲಿ ಭಾರಿ ಶಬ್ಧ ಕೇಳಿಸಿದ್ದು, ಕಂಪನದ ಅನುಭವವಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

'ಸ್ಫೋಟವಾದ ರೀತಿ ಜೋರು ಶಬ್ಧ ಇದ್ದಕ್ಕಿದ್ದಂತೆ ಕೇಳಿತು. ಕಂಪನದ ಅನುಭವವಾಯಿತು' ಎಂದು ಎನ್‌.ಆರ್.ಪುರ ನಿವಾಸಿ ನಾಗರಾಜ್ 'ಪ್ರಜಾವಾಣಿ'ಗೆ ತಿಳಿಸಿದರು. ಈ ಭಾಗದ ಹಲವು ಊರುಗಳಲ್ಲಿ ಶಬ್ಧ ಕೇಳಿಸಿದೆ. ಜನ ಬೆಚ್ಚಿದ್ದಾರೆ.

ಜೋರು ಶಬ್ಧ ಕೇಳಿದ ಕೂಡಲೇ ಜನರು ಮನೆಯಿಂದ ಹೊರ ಬಂದಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.