ADVERTISEMENT

ಹುಣಸೋಡು ಸ್ಫೋಟ: ಎಸ್.ಎಸ್. ಕ್ರಷರ್ ಪರವಾನಗಿ ರದ್ದು

​ಪ್ರಜಾವಾಣಿ ವಾರ್ತೆ
Published 30 ಜನವರಿ 2021, 18:08 IST
Last Updated 30 ಜನವರಿ 2021, 18:08 IST
   

ಶಿವಮೊಗ್ಗ: ಹುಣಸೋಡಿನಲ್ಲಿ ಸ್ಫೋಟ ಸಂಭವಿಸಿದ ಸ್ಥಳದಲ್ಲಿ ನಡೆಯುತ್ತಿದ್ದ ಎಸ್.ಎಸ್. ಕ್ರಷರ್‌ನ ಪರವಾನಗಿಯನ್ನು ಜಿಲ್ಲಾಡಳಿತ ರದ್ದುಗೊಳಿಸಿದೆ.

ಕಲ್ಲುಗಂಗೂರು ಸರ್ವೆ ನಂಬರ್ 2ರಲ್ಲಿ ಎಸ್‌.ಎಸ್‌. ಕ್ರಷರ್‌ ನಡೆಯುತ್ತಿತ್ತು. ಅಕ್ರಮವಾಗಿ ಸ್ಫೋಟಕ ಸಾಮಗ್ರಿಗಳನ್ನು ಸ್ಥಳಕ್ಕೆ ತಂದು ಮರು ವಿತರಣೆ ಮಾಡುವಾಗ ಸ್ಫೋಟ ಸಂಭವಿಸಿತ್ತು‌. ಘಟನೆಯಲ್ಲಿ ಆರು ಜನ ಮೃತಪಟ್ಟಿದ್ದರು. ಪ್ರಕರಣದ ನಂತರ ಕ್ರಷರ್ ನಡೆಸುತ್ತಿದ್ದ ಸುಧಾಕರ್ ಸೇರಿ ನಾಲ್ವರನ್ನು ಬಂಧಿಸಲಾಗಿತ್ತು. ಪರವಾನಗಿಯನ್ನು ರದ್ದುಗೊಳಿಸಿ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಆದೇಶಿಸಿದ್ದಾರೆ.

ಕ್ರಷರ್‌ನಿಂದ ಅಕ್ಕ–ಪಕ್ಕದ ಗ್ರಾಮಗಳಿಗೂ ತೊಂದರೆಯಾಗುತ್ತಿದೆ ಎಂದು ಸಾರ್ವಜನಿಕರು ಮುಖ್ಯಮಂತ್ರಿಗೂ ಮನವಿ ಸಲ್ಲಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.