ADVERTISEMENT

ಬಂಡೀಪುರ: ಅಕ್ರಮವಾಗಿ ಪ್ರವೇಶಿಸಿದ್ದ ಮೂವರು ವಿದೇಶಿಯರು ಅರಣ್ಯ ಇಲಾಖೆ ವಶದಲ್ಲಿ

​ಪ್ರಜಾವಾಣಿ ವಾರ್ತೆ
Published 8 ಜೂನ್ 2020, 11:37 IST
Last Updated 8 ಜೂನ್ 2020, 11:37 IST
 ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದ ಪೋರ್ಚುಗಲ್‌ನ‌ ಮೂವರು ಪ್ರಜೆಗಳು
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದ ಪೋರ್ಚುಗಲ್‌ನ‌ ಮೂವರು ಪ್ರಜೆಗಳು   

ಚಾಮರಾಜನಗರ: ಗುಂಡ್ಲುಪೇಟೆ ತಾಲ್ಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಪೋರ್ಚುಗಲ್‌ನ‌ ಮೂವರು ಪ್ರಜೆಗಳು ಅಕ್ರಮವಾಗಿ ಪ್ರವೇಶಿಸಿದ್ದಾರೆ.

ಭಾನುವಾರ ಈ ಘಟನೆ ನಡೆದಿದೆ. ಬೆಂಗಳೂರಿನಿಂದ ಬಾಡಿಗೆ ಬೈಕ್‌ನಲ್ಲಿ ಬಂದಿದ್ದ ಅವರು, ಅನುಮತಿ ಇಲ್ಲದೆ ಬಂಡೀಪುರದ ಅರಣ್ಯದ ರಸ್ತೆಗಳಲ್ಲಿ ಸಂಚರಿಸಿದ್ದಾರೆ.

'ಡಿಆರ್‌ಡಿಒದಲ್ಲಿ ವಿಮಾನ ರಿಪೇರಿ ಮಾಡುವ ಉದ್ದೇಶದಿಂದ ಅವರು ಬೆಂಗಳೂರಿಗೆ ಬಂದಿದ್ದರು. ಅಲ್ಲಿಂದ ಅನುಮತಿ‌ ಇಲ್ಲದೇ ಬಂಡೀಪುರಕ್ಕೆ ಬಂದಿದ್ದಾರೆ' ಎಂದು ಹುಲಿ ಯೋಜನೆ‌ ನಿರ್ದೇಶಕ ಟಿ.ಬಾಲಚಂದ್ರ ಅವರು 'ಪ್ರಜಾವಾಣಿ'ಗೆ ತಿಳಿಸಿದರು.

ADVERTISEMENT

'ಭಾನುವಾರ ಅರಣ್ಯದ ಕಚ್ಚಾ ರಸ್ತೆಯಲ್ಲಿ ಬೈಕ್ ನಲ್ಲಿ ಸಂಚರಿಸುತ್ತಿದ್ದರು. ಸಿಬ್ಬಂದಿ ತಡೆದು ವಿಚಾರಿಸಿದಾಗ ರೇಗಾಡಿದರು. ನಂತರ ಪೊಲೀಸರು ಹಾಗೂ ಇಲಾಖೆಯ ಅಧಿಕಾರಿಗಳು ಹೋದಾಗ ಸುಮ್ಮನಾದರು. ಅವರ‌ ಬಳಿ ಪಾಸ್ ಪೋರ್ಟ್ ಸೇರಿದಂತೆ‌ ಇನ್ನಿತರ ದಾಖಲೆಗಳು ಯಾವುದೂ ಇರಲಿಲ್ಲ. ಬೆಂಗಳೂರು ಬಿಟ್ಟು ಬೇರೆಲ್ಲೂ ಹೋಗುವುದಕ್ಕೆ‌ ಅನುಮತಿಯನ್ನು ಅವರು ಹೊಂದಿಲ್ಲ. ಹಾಗಿದ್ದರೂ ಬಾಡಿಗೆ ಬೈಕ್‌ನಲ್ಲಿ‌ ಬಂದಿದ್ದಾರೆ. ನಾವು ಅವರನ್ನು ಪೊಲೀಸರಿಗೆ ಒಪ್ಪಿಸಿದ್ದೇವೆ. ಮುಂದಿನ ಕ್ರಮ ಅವರು ಕೈಗೊಳ್ಳುತ್ತಾರೆ' ಎಂದು ಬಾಲಚಂದ್ರ ತಿಳಿಸಿದರು.

ಸದ್ಯ ‌ಮೂವರೂ ಗುಂಡ್ಲುಪೇಟೆ ಪಟ್ಟಣದಲ್ಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.