ADVERTISEMENT

ವಿದೇಶ ಪ್ರವಾಸಕ್ಕೆ ವಾರ್ತಾ ಇಲಾಖೆ ಆಯುಕ್ತ ಹೇಮಂತ್‌ ನಿಂಬಾಳ್ಕರ್‌

​ಪ್ರಜಾವಾಣಿ ವಾರ್ತೆ
Published 11 ಜೂನ್ 2025, 23:30 IST
Last Updated 11 ಜೂನ್ 2025, 23:30 IST
ಹೇಮಂತ್‌ ನಿಂಬಾಳ್ಕರ್
ಹೇಮಂತ್‌ ನಿಂಬಾಳ್ಕರ್   

ಬೆಂಗಳೂರು: ವಾರ್ತಾ ಇಲಾಖೆಯ ಆಯುಕ್ತ ಹೇಮಂತ್‌ ನಿಂಬಾಳ್ಕರ್‌ ಅವರು ಜೂನ್‌ 12ರಿಂದ 16 ದಿನಗಳು ವಿದೇಶ ಪ್ರವಾಸಕ್ಕೆ ತೆರಳುತ್ತಿದ್ದಾರೆ.

ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಅವರಿಗೆ ಇಲಾಖೆ ಗಳಿಕೆ ರಜೆ ಮಂಜೂರು ಮಾಡಿದೆ. ಕರ್ನಾಟಕ ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯ ನಿರ್ದೇಶಕ ಕೆ. ನಾಗೇಂದ್ರ ಪ್ರಸಾದ್‌ ಅವರಿಗೆ ಪ್ರಭಾರ ವಹಿಸಿದೆ.

ಐಪಿಎಸ್‌ ಅಧಿಕಾರಿ ನಿಂಬಾಳ್ಕರ್‌ ವಾರ್ತಾ ಇಲಾಖೆಯ ಆಯುಕ್ತ ಹುದ್ದೆಯ ಜತೆಗೆ ರಾಜ್ಯ ಗುಪ್ತಚರ ವಿಭಾಗದ ಎಡಿಜಿಪಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದರು.  

ADVERTISEMENT

ಆರ್‌ಸಿಬಿ ವಿಜಯೋತ್ಸವದ ವೇಳೆ ಕಾಲ್ತುಳಿತದಿಂದ 11 ಮಂದಿ ಮೃತಪಟ್ಟ ಘಟನೆ ನಂತರ ನಗರ ಪೊಲೀಸ್‌ ಕಮಿಷನರ್‌ ಸೇರಿ ನಾಲ್ವರು ಐಪಿಎಸ್‌ ಅಧಿಕಾರಿಗಳನ್ನು ಅಮಾನತು ಮಾಡಿದ್ದ ಸರ್ಕಾರ, ನಿಂಬಾಳ್ಕರ್‌ ಅವರನ್ನು ಗುಪ್ತಚರ ವಿಭಾಗದಿಂದ ಎತ್ತಂಗಡಿ ಮಾಡಿತ್ತು. 

ಕಾಲ್ತುಳಿತದ ಘಟನೆಯಲ್ಲಿ ರಾಜ್ಯ ಗುಪ್ತಚರ ವಿಭಾಗದ ವೈಫಲ್ಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಒಪ್ಪಿಕೊಂಡಿದ್ದರೂ, ಅವರ ವಿರುದ್ಧ ಕಠಿಣ ಕ್ರಮ ಜರುಗಿಸಿರಲಿಲ್ಲ. ಈಗ ಗಳಿಕೆ ರಜೆಯ ನೆಪದಲ್ಲಿ ವಿದೇಶಕ್ಕೆ ಹೋಗಲು ಅವಕಾಶ ನೀಡಲಾಗಿದೆ ಎಂದು ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.