ADVERTISEMENT

48 ಐಪಿಎಸ್‌ ಅಧಿಕಾರಿಗಳಿಗೆ ಮುಂಬಡ್ತಿ, ವರ್ಗಾವಣೆ: ಸರ್ಕಾರ ಆದೇಶ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2025, 23:30 IST
Last Updated 31 ಡಿಸೆಂಬರ್ 2025, 23:30 IST
   

ಬೆಂಗಳೂರು: 48 ಐಪಿಎಸ್ ಅಧಿಕಾರಿಗಳಿಗೆ ಮುಂಬಡ್ತಿ ನೀಡಿ ಮತ್ತು ವಿವಿಧ ಜಿಲ್ಲೆಗಳ ಎಸ್‌ಪಿಗಳು ಹಾಗೂ ಬೆಂಗಳೂರು ನಗರದ ಡಿಸಿಪಿಗಳನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಇಬ್ಬರು ಅಧಿಕಾರಿಗಳಿಗೆ ಐಜಿಪಿ ಹುದ್ದೆಗೆ ಪದೋನ್ನತಿ ನೀಡಲಾಗಿದೆ. 23 ಅಧಿಕಾರಿಗಳಿಗೆ ಡಿಐಜಿ ಹುದ್ದೆಗೆ ಮುಂಬಡ್ತಿ ನೀಡಲಾಗಿದೆ. ಬೆಂಗಳೂರು ನಗರ, ಬೆಳಗಾವಿ, ಮೈಸೂರು, ಶಿವಮೊಗ್ಗ, ಕೊಡಗು ಸೇರಿದಂತೆ ಪ್ರಮುಖ ಜಿಲ್ಲೆಗಳ ಎಸ್‌ಪಿ ಮತ್ತು ನಗರದ ಡಿಸಿಪಿಗಳನ್ನು ಬದಲಾಯಿಸಲಾಗಿದೆ.

ಬೆಂಗಳೂರು ನಗರದಲ್ಲಿ ವೈಟ್‌ಫೀಲ್ಡ್ ವಿಭಾಗಕ್ಕೆ ಸೈದುಲು ಅದಾವತ್, ಪಶ್ಚಿಮ ವಿಭಾಗಕ್ಕೆ ಎನ್‌. ಯತೀಶ್, ಈಶಾನ್ಯ ವಿಭಾಗಕ್ಕೆ ಮಿಥುನ್ ಕುಮಾರ್, ಪೂರ್ವ ವಿಭಾಗಕ್ಕೆ ವಿಕ್ರಮ್ ಆಮ್ಟೆ ಹಾಗೂ ಆಗ್ನೇಯ ವಿಭಾಗಕ್ಕೆ ಮಹಮ್ಮದ್ ಸುಜೀತಾ ಅವರನ್ನು ಡಿಸಿಪಿಗಳಾಗಿ ವರ್ಗಾವಣೆ ಮಾಡಲಾಗಿದೆ.

ADVERTISEMENT

ಬೆಳಗಾವಿ ಎಸ್‌ಪಿ ಭೀಮಾಶಂಕರ್ ಗುಳೇದ್ ಅವರಿಗೆ ಡಿಐಜಿ ಆಗಿ ಮುಂಬಡ್ತಿ ನೀಡಿ ಸಿಐಡಿ (ಆರ್ಥಿಕ ಅಪರಾಧ) ವಿಭಾಗಕ್ಕೆ ವರ್ಗಾಯಿಸಲಾಗಿದೆ. ಬೆಳಗಾವಿ ಎಸ್‌ಪಿ ಆಗಿ ಕೊಡಗಿನಲ್ಲಿದ್ದ ಕೆ. ರಾಮರಾಜನ್ ಅವರನ್ನು ನಿಯೋಜಿಸಲಾಗಿದೆ. ಮೈಸೂರು ಎಸ್‌ಪಿ ವಿಷ್ಣುವರ್ಧನ ಅವರಿಗೆ ಕೆಪಿಎ ನಿರ್ದೇಶಕ ಹುದ್ದೆ ನೀಡಲಾಗಿದ್ದು, ಮಂಡ್ಯ ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ ಅವರನ್ನು ಮೈಸೂರು ಎಸ್‌ಪಿಯಾಗಿ ವರ್ಗಾಯಿಸಲಾಗಿದೆ. 

ದಕ್ಷಿಣ ವಲಯದ ಡಿಐಜಿ ಆಗಿದ್ದ ಡಾ. ಎಂ.ಬಿ. ಬೋರಲಿಂಗಯ್ಯ ಅವರಿಗೆ ಐಜಿಪಿಯಾಗಿ ಮುಂಬಡ್ತಿ ನೀಡಿ, ಅದೇ ಹುದ್ದೆಯಲ್ಲಿ ಮುಂದುವರೆಸಲಾಗಿದೆ. ಬೆಂಗಳೂರು ನಗರ ಅಪರಾಧ ವಿಭಾಗದ ಜಂಟಿ ಆಯುಕ್ತ ಅಜಯ್ ಹಿಲೋರಿ ಅವರಿಗೂ ಐಜಿಪಿಯಾಗಿ ಪದೋನ್ನತಿ ನೀಡಲಾಗಿದೆ. 

‌ಮುಂಬಡ್ತಿ ಮತ್ತು ವರ್ಗಾವಣೆಗೊಂಡವರು:

ಡಾ. ಎಂ.ಬಿ. ಬೋರಲಿಂಗಯ್ಯ– ಐಜಿಪಿ, ದಕ್ಷಿಣ ವಲಯ, ಮೈಸೂರು

ಭೀಮಾಶಂಕರ್ ಗುಳೇದ್– ಡಿಐಜಿಪಿ, ಸಿಐಡಿ (ಆರ್ಥಿಕ ಅಪರಾಧ)

ಇಲಾಕ್ಕಿಯ ಕರುಣಾಕರನ್– ಡಿಐಜಿಪಿ, ವೈರ್‌ಲೆಸ್ (ನಿಸ್ತಂತು)

ವೇದಮೂರ್ತಿ– ಡಿಐಜಿಪಿ, ರಾಜ್ಯ ಗುಪ್ತಚರ

ಕೆ.ಎಂ. ಶಾಂತರಾಜು– ಡಿಐಜಿಪಿ, ಐಎಸ್‌ಡಿ

ಹನುಮಂತರಾಯ– ಡಿಐಜಿಪಿ, ಎಸ್‌ಎಚ್‌ಆರ್‌ಸಿ

ಡಿ. ದೇವರಾಜು– ಡಿಐಜಿಪಿ, ತರಬೇತಿ

ಡಾ. ಸಿರಿ ಗೌರಿ– ಡಿಐಜಿಪಿ, ಲೋಕಾಯುಕ್ತ

ಡಾ. ಕೆ. ಧರಣಿ ದೇವಿ– ಡಿಐಜಿಪಿ, ಗುಪ್ತಚರ

ಎಸ್. ಸವಿತಾ–  ಡಿಐಜಿಪಿ, ಗೃಹ ರಕ್ಷಕ ದಳ

ಸಿ.ಕೆ. ಬಾಬಾ– ಡಿಐಜಿಪಿ, ಕೆಎಸ್‌ಆರ್‌ಪಿ

ಅಬ್ದುಲ್ ಅಹದ್ – ನಿರ್ದೇಶಕ, ಬಿಎಂಟಿಸಿ (ದರ್ಜೆ ಏರಿಕೆ)

ಎಸ್. ಗಿರೀಶ್– ಡಿಐಜಿಪಿ, ಎಎನ್‌ಟಿಎಫ್

ಎಂ. ಪುಟ್ಟಮಾದಯ್ಯ–  ಡಿಐಜಿಪಿ, ಪ್ರಾಂಶುಪಾಲರು, ಪಿಟಿಸಿ ಕಲಬುರಗಿ

ಟಿ. ಶ್ರೀಧರ– ಡಿಐಜಿಪಿ, ಕೇಂದ್ರ ಕಚೇರಿ

ಎ.ಎನ್. ಪ್ರಕಾಶ್ ಗೌಡ– ಡಿಐಜಿಪಿ, ಎಸ್‌ಎಎಫ್

ಜಿನೇಂದ್ರ ಖನಗಾವಿ– ಡಿಐಜಿಪಿ, ಕಾರಾಗೃಹ

ಜೆ.ಕೆ. ರಶ್ಮಿ– ಡಿಐಜಿಪಿ, ರೈಲ್ವೆ

ಟಿ.ಪಿ. ಶಿವಕುಮಾರ್– ಡಿಐಜಿಪಿ, ಎಸ್‌ಸಿಆರ್‌ಬಿ

ವಿಷ್ಣುವರ್ಧನ– ನಿರ್ದೇಶಕ, ಕೆಪಿಎ

ಡಾ. ಸಂಜೀವ್ ಎಂ. ಪಾಟೀಲ್– ಡಿಐಜಿಪಿ, ಜನರಲ್

ಕೆ. ಪರಶುರಾಮ– ಡಿಐಜಿಪಿ, ಸಿಟಿಆರ್‌ಎಸ್

ಎಚ್.ಡಿ. ಆನಂದ್ ಕುಮಾರ್– ಡಿಐಜಿಪಿ, ಸೈಬರ್ ಕಮಾಂಡ್

ಕಲಾ ಕೃಷ್ಣಸ್ವಾಮಿ–  ಡಿಐಜಿಪಿ, ಅಪರಾಧ

ಅಜಯ್ ಹಿಲೋರಿ– ಹೆಚ್ಚುವರಿ ಆಯುಕ್ತ (ಐಜಿಪಿ ದರ್ಜೆ), ಅಪರಾಧ, ಬೆಂಗಳೂರು

ಚಂದ್ರಕಾಂತ್ ಎಂ.ವಿ– ಎಸ್‌ಪಿ, ಬೆಂಗಳೂರು ಗ್ರಾಮಾಂತರ

ಸೈದುಲು ಅದಾವತ್– ಡಿಸಿಪಿ, ವೈಟ್‌ಫೀಲ್ಡ್, ಬೆಂಗಳೂರು

ಎನ್ ಯತೀಶ್– ಡಿಸಿಪಿ, ಪಶ್ಚಿಮ ವಿಭಾಗ, ಬೆಂಗಳೂರು

ಕೆ. ರಾಮರಾಜನ್– ಎಸ್‌ಪಿ, ಬೆಳಗಾವಿ

ಬಿ. ನಿಖಿಲ್– ಎಸ್‌ಪಿ, ಶಿವಮೊಗ್ಗ

ಅರುಣಾಂಗ್ಷು ಗಿರಿ–  ಎಸ್‌ಪಿ, ರಾಯಚೂರು

ಶುಭನ್ವಿತಾ– ಎಸ್‌ಪಿ, ಹಾಸನ

ಮಿಥುನ್ ಕುಮಾರ್– ಡಿಸಿಪಿ, ಈಶಾನ್ಯ ವಿಭಾಗ, ಬೆಂಗಳೂರು

ವಿಕ್ರಮ್ ಆಮ್ಟೆ– ಡಿಸಿಪಿ, ಪೂರ್ವ ವಿಭಾಗ, ಬೆಂಗಳೂರು

ಜಿತೇಂದ್ರ ಕುಮಾರ್ ದಯಾಮ– ಎಸ್‌ಪಿ, ಚಿಕ್ಕಮಗಳೂರು

ಕನ್ನಿಕಾ ಸಿಕ್ರಿವಾಲ್– ಎಸ್‌ಪಿ, ಕೋಲಾರ

ಬಿಂದು ಮಣಿ– ಎಸ್‌ಪಿ, ಕೊಡಗು

ಎಂ.ಎಸ್. ಮಹಮ್ಮದ್ ಸುಜೀತಾ– ಡಿಸಿಪಿ, ಆಗ್ನೇಯ ವಿಭಾಗ, ಬೆಂಗಳೂರು

ಶೋಭಾರಾಣಿ– ಎಸ್‌ಪಿ, ಮಂಡ್ಯ

ಸಾರಾ ಫಾತಿಮಾ– ಎಸ್‌ಪಿ, ರೈಲ್ವೆ

ಎಂ. ಮುತ್ತುರಾಜು– ಎಸ್‌ಪಿ, ಚಾಮರಾಜನಗರ

ಕವಿತಾ ಬಿ.ಟಿ–  ಎಸ್‌ಪಿ, ಸಿಐಡಿ, ಬೆಂಗಳೂರು

ಸಜಿತ್– ಎಸ್‌ಪಿ, ಐಎಸ್‌ಡಿ

ಪವನ್ ನೆಜ್ಜೂರ್– ಎಸ್‌ಪಿ, ಬಳ್ಳಾರಿ

ಮಲ್ಲಿಕಾರ್ಜುನ ಬಾಲದಂಡಿ– ಎಸ್‌ಪಿ, ಮೈಸೂರು

ಸಾಮ್ ವರ್ಗೀಸ್ – ಎಸ್‌ಪಿ, ಸಿಐಡಿ

ಶಾಲೂ– ಎಸ್‌ಪಿ, ಸಿಐಡಿ

ಡಾ. ಹರ್ಷ ಪ್ರಿಯಂವದ– ಎಸ್‌ಪಿ ಸಿಐಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.