ADVERTISEMENT

ಸಿದ್ದರಾಮಯ್ಯ ಯಾವ ಪಕ್ಷದಿಂದ ಹೋಗಿ 5 ವರ್ಷ ಮುಖ್ಯಮಂತ್ರಿಯಾದ್ರು? ದೇವೇಗೌಡ ಗುಡುಗು

​ಪ್ರಜಾವಾಣಿ ವಾರ್ತೆ
Published 30 ಜನವರಿ 2019, 12:21 IST
Last Updated 30 ಜನವರಿ 2019, 12:21 IST
   

ಬೆಂಗಳೂರು: ಸಿದ್ದರಾಮಯ್ಯ ಯಾವ ಪಕ್ಷದಿಂದ ಹೋಗಿ 5 ವರ್ಷ ಮುಖ್ಯಮಂತ್ರಿಯಾದರು ಎಂಬುದನ್ನು ಮೊದಲು ಅರ್ಥ ಮಾಡಿಕೊಳ್ಳಲಿ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಸಿದ್ದರಾಮಯ್ಯ ವಿರುದ್ಧ ಗುಡುಗಿದ್ದಾರೆ.

ಜೆಡಿಎಸ್‌ನ ರಾಷ್ಟ್ರೀಯ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮುಖ್ಯಮಂತ್ರಿಗಳುಸಿದ್ಧರಾಮಯ್ಯ ಘೋಷಿಸಿದ್ದ ಎಲ್ಲಾ ಯೋಜನೆಗಳಿಗೆ ಹಣ ಕೊಟ್ಟು ಸಾಲ ಮನ್ನಾ ಮಾಡಿದ್ದಾರೆ. ಆದರೂ ನೀವುಬೆಳಗ್ಗೆ ಒಂದು, ಸಂಜೆ ಒಂದು ಮಾತನ್ನಾಡುತ್ತೀರಾ? ನಾವು ಮಾಡಿದ ಕೆಲಸಕ್ಕೆ ಮಸಿ ಬಳಿಯುತ್ತೀರಾ? ಎಂದು ದೇವೇಗೌಡ ಸಿದ್ದರಾಮಯ್ಯ ವಿರುದ್ಧ ಕೆಂಡಾಮಂಡಲವಾದರು.

ನೀವು 5 ವರ್ಷ ಮುಖ್ಯಮಂತ್ರಿ ಆಗಿದ್ದಾಗ, ನಿಮ್ಮ ಕೆಲಸದ ಬಗ್ಗೆ ಒಂದು ಶಬ್ದವನ್ನೂ ಮಾತನಾಡಿಲ್ಲ,ಅಕ್ರಮವೋ ಸಕ್ರಮವೋ ಏನನ್ನೂ ನಾನು ಮಾತನಾಡಲಿಲ್ಲ. ಆದರೆಕಾಂಗ್ರೆಸ್ ಶಾಸಕರು ಮುಖ್ಯಮಂತ್ರಿ ಕುಮಾರಸ್ವಾಮಿ ಕೈಗೆ ಸಿಗುತ್ತಿಲ್ಲ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ.ಒಂದೇ ಒಂದು ನಿಗಮ ಸ್ಥಾನವನ್ನು ಬಿಟ್ಟು ಎಲ್ಲಾ ಸ್ಥಾನಗಳನ್ನು ಅವರಿಗೆ ಕೊಟ್ಟಿದ್ದೇವೆ, ಇನ್ನು ನಾವು ಹೇಗೆ ಆಡಳಿತ ನಡೆಸಬೇಕು ಎಂದು ದೇವೇಗೌಡರು ಪ್ರಶ್ನೆ ಮಾಡಿದರು.

ADVERTISEMENT

ಸಿದ್ದರಾಮಯ್ಯ ಈಗ ಮೊದಲಿನ ತರಹ ಇಲ್ಲ, ಅವರು ಜೆಡಿಎಸ್‌ ಅಧ್ಯಕ್ಷರಾಗಿದ್ದಾಗ ಪಕ್ಷಕ್ಕೆ ಯಾವ ಕೆಲಸವನ್ನು ಮಾಡಲಿಲ್ಲ, ಆಗ ನನಗಾಗಿರುವ ನೋವು ದೇವರಿಗೆ ಮಾತ್ರ ಗೊತ್ತು ಎಂದರು.

ಸೋನಿಯಾಗಾಂಧಿ ಮೇಲೆ ಒತ್ತಡ ಹಾಕಿದ್ದರೆ ನಾನು ಅಂದೇ ಮುಖ್ಯಮಂತ್ರಿಯಾಗುತ್ತಿದೆ ಎಂದು ಅವರು ಹೇಳಿದ್ದಾರೆ ಇದಕ್ಕೆ ಸೋನಿಯಾಗಾಂಧಿ ಅವರೇ ಉತ್ತರಿಸಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.