ADVERTISEMENT

ತುರುವೇಕೆರೆಯಿಂದ ಟೆನ್ನಿಸ್‌ ಕೃಷ್ಣ: ಆಮ್ ಆದ್ಮಿ ಪಕ್ಷದ ಮೊದಲ ಪಟ್ಟಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2023, 14:54 IST
Last Updated 20 ಮಾರ್ಚ್ 2023, 14:54 IST
   

ಬೆಂಗಳೂರು: ವಿಧಾನಸಭಾ ಚುನಾವಣೆಗೆ ಆಮ್‌ ಆದ್ಮಿ ಪಕ್ಷದ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಸೋಮವಾರ ಪ್ರಕಟಿಸಿದೆ.

80 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಘೋಷಿಸಲಾಗಿದೆ. ಚಿಕ್ಕಪೇಟೆ ಕ್ಷೇತ್ರದಿಂದ ಬೃಜೇಶ್‌ ಕಾಳಪ್ಪ, ತುರುವೇಕೆರೆಯಿಂದ ಟೆನ್ನಿಸ್‌ ಕೃಷ್ಣ, ಮಹಾಲಕ್ಷ್ಮಿ ಬಡಾವಣೆಯಿಂದ ಶಾಂತಲಾ ದಾಮ್ಲೆ ಸ್ಪರ್ಧಿಸಲಿದ್ದಾರೆ.

ಪಟ್ಟಿ ಬಿಡುಗಡೆ ಮಾಡಿದ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಪೃಥ್ವಿರೆಡ್ಡಿ, ‘ಅಭ್ಯರ್ಥಿಗಳಲ್ಲಿ ಹೆಚ್ಚಿನವರು ಯುವ ಸ್ಪರ್ಧಿಗಳು. ಇವರಲ್ಲಿ ಅರ್ಧಕ್ಕಿಂತಲೂ ಹೆಚ್ಚು ಜನರು 45 ವರ್ಷಕ್ಕಿಂತ ಕಡಿಮೆ ವಯಸ್ಸಿನವರು. ಈ ಪಟ್ಟಿಯಲ್ಲಿ ಏಳು ರೈತರು ಇದ್ದಾರೆ’ ಎಂದು ತಿಳಿಸಿದರು.

ADVERTISEMENT

‘ಪಕ್ಷವು ಮಹಿಳೆಯರಿಗೆ ಆದ್ಯತೆ ನೀಡುತ್ತಿದೆ. ಮೊದಲ ಪಟ್ಟಿಯಲ್ಲಿ ಏಳು ಮಹಿಳೆಯರಿದ್ದಾರೆ ಮತ್ತು ಐವರು ಸಾಮಾಜಿಕ ಕಾರ್ಯಕರ್ತರಿದ್ದಾರೆ. ಸಾಮಾನ್ಯ ಹಿನ್ನೆಲೆಯ ಪ್ರಾಮಾಣಿಕ ಜನರನ್ನು ನಾವು ರಾಜಕೀಯಕ್ಕೆ ಕರೆತಂದಿದ್ದೇವೆ’ ಎಂದರು.

ಕ್ಷೇತ್ರ;ಅಭ್ಯರ್ಥಿಗಳು

ತೇರದಾಳ; ಅರ್ಜುನ ಹಲಗಿಗೌಡರ
ಬಾದಾಮಿ;ಶಿವರಾಯಪ್ಪ ಜೋಗಿನ
ಬಾಗಲಕೋಟೆ;ರಮೇಶ ಬದ್ನೂರ
ಅಥಣಿ;ಸಂಪತ್ ಕುಮಾರ ಶೆಟ್ಟಿ
ಬೈಲಹೊಂಗಲ;ಬಿ.ಎಂ. ಚಿಕ್ಕನಗೌಡರ
ರಾಮದುರ್ಗ;ಮಲ್ಲಿಕಜಾನ್‌ ನದಾಫ್‌
ಹುಬ್ಬಳ್ಳಿ-ಧಾರವಾಡ ಪೂರ್ವ;ಬಸವರಾಜ ಎಸ್‌ ತೇರದಾಳ
ಹುಬ್ಬಳ್ಳಿ-ಧಾರವಾಡ ಕೇಂದ್ರ;ವಿಕಾಸ ಸೊಪ್ಪಿನ
ಕಲಘಟಗಿ;ಮಂಜುನಾಥ ಜಕ್ಕಣ್ಣವರ
ರೋಣ;ಆನೇಕಲ್‌ ದೊಡ್ಡಯ್ಯ
ಬ್ಯಾಡಗಿ;ಎಂ.ಎನ್.‌ ನಾಯಕ
ರಾಣೆಬೆನ್ನೂರು;ಹನುಮಂತಪ್ಪ ಕಬ್ಬಾರ
ಬಸವಕಲ್ಯಾಣ;ದೀಪಕ ಮಲಗಾರ
ಹುಮನಾಬಾದ;ಬ್ಯಾಂಕ್‌ ರೆಡ್ಡಿ
ಬೀದರ ದಕ್ಷಿಣ;ನಸೀಮುದ್ದಿನ್‌ ಪಟೇಲ್‌
ಭಾಲ್ಕಿ;ತುಕಾರಾಮ ನಾರಾಯಣರಾವ್ ಹಜಾರೆ
ಔರಾದ;ಬಾಬುರಾವ ಅಡ್ಕೆ
ಕಲಬುರಗಿ ಗ್ರಾಮೀಣ;ಡಾ. ರಾಘವೇಂದ್ರ ಚಿಂಚನಸೂರ
ಕಲಬುರಗಿ ದಕ್ಷಿಣ;ಸಿದ್ದರಾಮ ಅಪ್ಪಾರಾವ ಪಾಟೀಲ
ಕಲಬುರಗಿ ಉತ್ತರ;ಸಯ್ಯದ್‌ ಸಜ್ಜಾದ್‌ ಅಲಿ
ಇಂಡಿ;ಗೋಪಾಲ ಆರ್‌ ಪಾಟೀಲ
ಗಂಗಾವತಿ;ಶರಣಪ್ಪ ಸಜ್ಜಿಹೊಲ
ರಾಯಚೂರು ಗ್ರಾಮೀಣ;ಡಾ. ಸುಭಾಶಚಂದ್ರ ಸಾಂಭಾಜಿ
ರಾಯಚೂರು;ಡಿ. ವೀರೇಶ ಕುಮಾರ ಯಾದವ್‌
ಮಾನ್ವಿ;ರಾಜಾ ಶಾಮಸುಂದರ ನಾಯಕ
ಲಿಂಗಸುಗೂರು;ಶಿವಪುತ್ರ ಗಾಣದಾಳ
ಸಿಂಧನೂರು;ಸಂಗ್ರಾಮ ನಾರಾಯಣ ಕಿಲ್ಲೇದ
ವಿಜಯನಗರ;ಡಿ. ಶಂಕರದಾಸ್‌
ಕೂಡ್ಲಿಗಿ;ಎನ್‌. ಶ್ರೀನಿವಾಸ್‌
ಹರಪನಹಳ್ಳಿ;ಎಚ್‌. ನಾಗರಾಜ

ಚಿತ್ರದುರ್ಗ;ಜಗದೀಶ ಬಿ. ಇ.
ಜಗಳೂರು;ಗೋವಿಂದರಾಜು
ಹರಿಹರ;ಗಣೇಶಪ್ಪ ದುರ್ಗದ
ದಾವಣಗೆರೆ ಉತ್ತರ;ಶ್ರೀಧರ ಪಾಟೀಲ
ತುರುವೇಕೆರೆ;ಟೆನ್ನಿಸ್‌ ಕೃಷ್ಣ
ಕುಣಿಗಲ್‌;ಜಯರಾಮಯ್ಯ
ಗುಬ್ಬಿ;ಪ್ರಭುಸ್ವಾಮಿ
ಸಿರಾ;ಶಶಿಕುಮಾರ್
ಪಾವಗಡ;ಎನ್‌. ರಾಮಾಂಜನಪ್ಪ
ಶೃಂಗೇರಿ;ರಾಜನ್‌ ಗೌಡ ಎಚ್.ಎಸ್‌.
ಹಾಸನ;ಅಗಿಲೆ ಯೋಗೀಶ್‌
ಭದ್ರಾವತಿ;ಆನಂದ್‌
ಶಿವಮೊಗ್ಗ;ಟಿ. ನೇತ್ರಾವತಿ
ಸಾಗರ;ಕೆ. ದಿವಾಕರ
ಮೂಡಬಿದ್ರಿ;ವಿಜಯನಾಥ ವಿಠಲ ಶೆಟ್ಟಿ
ಮಂಗಳೂರು ನಗರ ದಕ್ಷಿಣ;ಸಂತೋಷ್‌ ಕಾಮತ್‌
ಸುಳ್ಯ;ಸುಮನಾ
ಕಾರ್ಕಳ;ಡ್ಯಾನಿಯಲ್
ಶಿರಸಿ;ಹಿತೇಂದ್ರ ನಾಯಕ
ಮಳವಳ್ಳಿ;ಬಿಸಿ ಮಹದೇವಸ್ವಾಮಿ
ಮಂಡ್ಯ;ಬೊಮ್ಮಯ್ಯ
ಪಿರಿಯಾಪಟ್ಟಣ;ರಾಜಶೇಖರ್‌ ದೊಡ್ಡಣ್ಣ
ಚಾಮರಾಜ;ಮಾಲವಿಕಾ ಗುಬ್ಬಿವಾಣಿ
ನರಹಿಂಹರಾಜ;ಧರ್ಮಶ್ರೀ
ಟಿ. ನರಸಿಪುರ;ಸಿದ್ದರಾಜು
ಮಾಗಡಿ;ರವಿಕಿರಣ್‌ ಎಂ.ಎನ್.
ರಾಮನಗರ;ನಂಜಪ್ಪ ಕಾಳೇಗೌಡ
ಕನಕಪುರ;ಪುಟ್ಟರಾಜು ಗೌಡ
ಚನ್ನಪಟ್ಟಣ:ಶರತ್ ಚಂದ್ರ
ದೇವನಹಳ್ಳಿ;ಶಿವಪ್ಪ ಬಿ.ಕೆ.
ದೊಡ್ಡಬಳ್ಳಾಪುರ;ಪುರುಷೋತ್ತಮ
ನೆಲಮಂಗಲ;ಗಂಗಬೈಲಪ್ಪ ಬಿ.ಎಂ.
ಬಾಗೇಪಲ್ಲಿ;ಮಧುಸೀತಪ್ಪ
ಚಿಂತಾಮಣಿ:ಸಿ. ಬೈರೆಡ್ಡಿ
ಕೊಲಾರ್‌ ಗೋಲ್ಡ್‌ ಫೀಲ್ಡ್‌;ಆರ್.‌ ಗಗನ ಸುಕನ್ಯ
ಮಾಲೂರು:ರವಿಶಂಕರ್‌ ಎಂ.
ದಾಸರಹಳ್ಳಿ;ಕೀರ್ತನ್‌ ಕುಮಾರ
ಮಹಾಲಕ್ಷ್ಮಿ ಬಡಾವಣೆ;ಶಾಂತಲಾ ದಾಮ್ಲೆ
ಮಲ್ಲೇಶ್ವರ;ಸುಮನ್ ಪ್ರಶಾಂತ್‌
ಹೆಬ್ಬಾಳ;ಮಂಜುನಾಥ ನಾಯ್ಡು
ಪುಲಕೇಶಿನಗರ;ಸುರೇಶ್‌ ರಾಥೋಡ್‌
ಸಿ.ವಿ.ರಾಮನ್‌ ನಗರ;ಮೋಹನ ದಾಸರಿ
ಶಿವಾಜಿನಗರ;ಪ್ರಕಾಶ್‌ ನೆಡುಂಗಡಿ
ಶಾಂತಿನಗರ;ಕೆ. ಮಥಾಯ್
ರಾಜಾಜಿನಗರ;ಬಿ.ಟಿ. ನಾಗಣ್ಣ
ವಿಜಯನಗರ;ಡಾ. ರಮೇಶ್‌ ಬೆಲ್ಲಂಕೊಂಡ
ಚಿಕ್ಕಪೇಟೆ;ಬೃಜೇಶ್‌ ಕಾಳಪ್ಪ
ಪದ್ಮನಾಭನಗರ;ಅಜಯ್‌ ಗೌಡ
ಬಿ.ಟಿ.ಎಂ ಬಡಾವಣೆ;ಶ್ರೀನಿವಾಸ್‌ ರೆಡ್ಡಿ
ಬೊಮ್ಮನಹಳ್ಳಿ;ಸೀತಾರಾಮ್‌ ಗುಂಡಪ್ಪ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.