ADVERTISEMENT

ಲಕ್ಷ್ಮಣ ಸವದಿ ಬಿಜೆಪಿ ಉಪಾಧ್ಯಕ್ಷ: ರಾಜ್ಯ ಕೇಸರಿ ಪಡೆಯಲ್ಲಿ 12 ಜನ ವಿಪಿಗಳು

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2021, 14:18 IST
Last Updated 26 ಡಿಸೆಂಬರ್ 2021, 14:18 IST
ಲಕ್ಷ್ಮಣ ಸಂಗಪ್ಪ ಸವದಿ
ಲಕ್ಷ್ಮಣ ಸಂಗಪ್ಪ ಸವದಿ   

ಬೆಂಗಳೂರು: ವಿಧಾನ ಪರಿಷತ್‌ ಸದಸ್ಯ ಲಕ್ಷ್ಮಣ ಸವದಿ ಮತ್ತು ನಯನಾ ಗಣೇಶ್‌ ಅವರನ್ನು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷರನ್ನಾಗಿ ನೇಮಿಸಿದ್ದು, ಇದರಿಂದ ಪಕ್ಷದಲ್ಲಿ ಉಪಾಧ್ಯಕ್ಷರ ಸಂಖ್ಯೆ 12 ಕ್ಕೇರಿದೆ.

ಪಕ್ಷದ ಮುಖ್ಯ ವಕ್ತಾರರಾಗಿದ್ದ ಕ್ಯಾಪ್ಟನ್‌ ಗಣೇಶ್‌ ಕಾರ್ಣಿಕ್ ಅವರನ್ನು ಅನಿವಾಸಿ ಭಾರತೀಯ ವಿಭಾಗದ ಸಂಚಾಲಕರನ್ನಾಗಿ ನೇಮಿಸಿದ್ದು, ಮೈಸೂರಿನ ಎಂ.ಜಿ.ಮಹೇಶ್ ಅವರನ್ನು ರಾಜ್ಯ ಮುಖ್ಯ ವಕ್ತಾರರನ್ನಾಗಿ ನೇಮಿಸಲಾಗಿದೆ.

ಪ್ರಕೋಷ್ಠಗಳ ರಾಜ್ಯ ಸಹ ಸಂಯೋಜಕ– ಜಯತೀರ್ಥ ಕಟ್ಟಿ, ಕಾನೂನು ಪ್ರಕೋಷ್ಠ ರಾಜ್ಯ ಸಂಚಾಲಕ– ಎಚ್‌.ಯೋಗೇಂದ್ರ, ಕಾನೂನು ಪ್ರಕೋಷ್ಠದ ಸಹ ಸಂಚಾಲಕ– ವಿನೋದ್‌ ಪಾಟೀಲ, ಮೀನುಗಾರರ ಪ್ರಕೋಷ್ಠ ರಾಜ್ಯ ಸಂಚಾಲಕ– ಗೋವಿಂದ ಬಾಂಡೇಕರ, ಮೀನುಗಾರರ ಪ್ರಕೋಷ್ಠ ಸಹ ಸಂಚಾಲಕ– ನಾಗಪ್ಪ ಅಂಬಿ, ಫಲಾನುಭವಿಗಳ ಪ್ರಕೋಷ್ಠ, ರಾಜ್ಯ ಸಂಚಾಲಕ– ಬಸವರಾಜ ಮತ್ತಿಮೋಡ.

ADVERTISEMENT

ಜಿಲ್ಲಾ ಪ್ರಭಾರಿಗಳು: ಜಗದೀಶ ಹಿರೇಮನಿ– ಮಂಡ್ಯ, ಅಮರನಾಥ ಪಾಟೀಲ– ಯಾದಗಿರಿ, ಕೆ.ಶಿವಲಿಂಗಪ್ಪ–ದಾವಣಗೆರೆ, ಸಿ.ಆರ್‌.ಪ್ರೇಮಕುಮಾರ್‌– ಚಿತ್ರದುರ್ಗ, ಕೆ.ವಿ.ಶಿವಪ್ಪ– ಬೆಂಗಳೂರು ಉತ್ತರ ಜಿಲ್ಲೆ, ಮುರಹರಗೌಡ– ಬಳ್ಳಾರಿ, ಚನ್ನಬಸವನಗೌಡ– ವಿಜಯನಗರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.