ADVERTISEMENT

ರಾಜ್ಯದಿಂದ ತಮಿಳುನಾಡಿಗೆ ಬಸ್‌ ಸಂಚಾರ ನಾಳೆಯಿಂದ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2021, 14:25 IST
Last Updated 22 ಆಗಸ್ಟ್ 2021, 14:25 IST
ಕೆಎಸ್‌ಆರ್‌ಟಿಸಿ ಬಸ್ (ಪ್ರಾತಿನಿಧಿಕ ಚಿತ್ರ)
ಕೆಎಸ್‌ಆರ್‌ಟಿಸಿ ಬಸ್ (ಪ್ರಾತಿನಿಧಿಕ ಚಿತ್ರ)   

ಬೆಂಗಳೂರು: ರಾಜ್ಯದಿಂದ ತಮಿಳುನಾಡಿಗೆ ರಾಜ್ಯ ರಸ್ತೆ ಸಾರಿಗೆ ಬಸ್‌ಗಳ ಸಂಚಾರ ಸೋಮವಾರದಿಂದ (ಆ.23) ಪುನರಾರಂಭವಾಗಲಿದೆ.

ಸೇವೆ ಒದಗಿಸಲು 250 ಬಸ್‌ಗಳು ಸಜ್ಜಾಗಿವೆ. ಕರ್ನಾಟಕದಿಂದ ತಮಿಳುನಾಡಿನ ಹೊಸೂರ್, ವೆಲ್ಲೋರೆ, ತಿರುವನ್ನಮಲೈ, ವಿಲ್ಲುಪುರ, ಕೊಯಿಮತ್ತೂರ್, ತಿರುನಲ್ಲೂರ್, ತಿರುಚ್ಚಿ, ಮಧುರೈ, ಕುಂಭಕೋಣಂ, ಕಾಂಚಿಪುರ ಹಾಗೂ ಊಟಿ ಸೇರಿದಂತೆ ಪ್ರಮುಖ ನಗರಗಳಿಗೆ ಬಸ್‌ಗಳು ಸಂಚರಿಸಲಿವೆ ಎಂದು ಕೆಎಸ್‌ಆರ್‌ಟಿಸಿ ಪ್ರಕಟಣೆಯಲ್ಲಿ ಹೇಳಿದೆ.

ಕೋವಿಡ್‌ ನಿರ್ಬಂಧಗಳ ಕಾರಣದಿಂದ ಏ.27ರಿಂದ ತಮಿಳುನಾಡಿಗೆ ಬಸ್‌ ಸಂಚಾರ ಸ್ಥಗಿತಗೊಳಿಸಲಾಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.