ADVERTISEMENT

PHOTOS | ಚಳಿಗೆ ನಡುಗಿದ ರಾಜ್ಯದ ಜನರು: ಬೆಚ್ಚನೆಯ ಉಡುಪಿಗೆ ಬೇಡಿಕೆ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2025, 14:09 IST
Last Updated 16 ಡಿಸೆಂಬರ್ 2025, 14:09 IST
<div class="paragraphs"><p>ರಾಜ್ಯದಾದ್ಯಂತ ಚಳಿ ಹೆಚ್ಚಳವಾಗಿದೆ. ಕಲಬುರಗಿ ನಗರದಲ್ಲಿ ಮುಂಜಾನೆ ಜನ ಬೆಚ್ಚನೆಯ ಹೊದಿಕೆ ಹೊದ್ದು ಬೆಂಕಿ ಕಾಯಿಸಿಕೊಂಡಿದ್ದು ಹೀಗೆ</p></div>

ರಾಜ್ಯದಾದ್ಯಂತ ಚಳಿ ಹೆಚ್ಚಳವಾಗಿದೆ. ಕಲಬುರಗಿ ನಗರದಲ್ಲಿ ಮುಂಜಾನೆ ಜನ ಬೆಚ್ಚನೆಯ ಹೊದಿಕೆ ಹೊದ್ದು ಬೆಂಕಿ ಕಾಯಿಸಿಕೊಂಡಿದ್ದು ಹೀಗೆ

   

ಪ್ರಜಾವಾಣಿ ಚಿತ್ರ: ತಾಜುದ್ದೀನ್ ಆಜಾದ್

ಬೆಂಗಳೂರಿನಲ್ಲಿ ಚಳಿ ಹೆಚ್ಚಾದಾಗ ಜನರು ಸ್ವೆಟರ್‌ಗಳ ಮೊರೆ ಹೋಗುತಿದ್ದಾರೆ

ADVERTISEMENT

ಕಲಬುರಗಿ ಹೊರವಲಯದ ರಾಮತೀರ್ಥದ ಬಳಿಯ ಬಯಲಿನಲ್ಲಿ ಮೈ ಕೊರೆಯುವ ಚಳಿಯಿಂದ ತಪ್ಪಿಸಿಕೊಳ್ಳಲು ಬೆಂಕಿ ಕಾಯಿಸಿಕೊಳ್ಳುತ್ತಿರುವ ಅಲೆಮಾರಿ ಸಮುದಾಯದವರು ಕ್ಯಾಮೆರಾ ಕಣ್ಣಿಗೆ ಕಂಡಿದ್ದು ಹೀಗೆ.

ವಿಶೇಷವಾಗಿ ಡಿಸೆಂಬರ್-ಜನವರಿ ತಿಂಗಳಲ್ಲಿ ತಾಪಮಾನ ಕುಸಿತದಿಂದಾಗಿ ಚಳಿಯಿಂದ ರಕ್ಷಣೆಗಾಗಿ ಸ್ವೆಟರ್, ಜಾಕೆಟ್, ಶಾಲುಗಳನ್ನು ಖರೀದಿಸುತ್ತಿದ್ದಾರೆ.

ಚಳಿಗೆ ಬೆಚ್ಚನೆಯ ಉಡುಪುಗಳನ್ನು ಖರೀದಿಸುತ್ತಿರುವ ಜನ

ಚಿಕ್ಕಮಗಳೂರಿನಲ್ಲಿ ಚಳಿಯಿಂದ ರಕ್ಷಿಸಿಕೊಳ್ಳಲು ಬೆಂಕಿಯ ಬಿಸಿ ತೆಗೆದುಕೊಳ್ಳುತ್ತಿರುವ ಜನ

ಚಳಿಯಿಂದ ತಪ್ಪಿಸಿಕೊಳ್ಳಲು ಬೆಚ್ಚನೆಯ ಉಡುಪಿನ ಮೊರೆಹೋದ ಬೀದರ್‌ನ ಜನ

ಚಳಿ ಹೆಚ್ಚಾದ ಹಿನ್ನೆಲೆಯಲ್ಲಿ ಕಲಬುರಗಿಯ ಹೊರವಲಯ ಇಟ್ಟಂಗಿ ಬಟ್ಟಿಯ ಕಾರ್ಮಿಕ ದಂಪತಿ ಮಗುವಿಗೆ ತಂಪು ತಾಕದಂತೆ ಬೆಚ್ಚನೆ ಬಟ್ಟೆ ತೊಡಿಸಿರುವುದು.

ಬೆಂಗಳೂರಿನಲ್ಲಿ ಮೈಕೊರೆಯುವ ಚಳಿ ಕಾಣಿಸಿಕೊಂಡಿದ್ದು ಜತೆಗೆ ಮೋಡ ಕವಿದ ವಾತಾವರಣವೂ ಕಂಡುಬಂದಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.