ADVERTISEMENT

ನಾನೂ ಒಂದು ದಿನ ಸಚಿವನಾಗುತ್ತೇನೆ: ಎಂ.ಟಿ.ಬಿ. ನಾಗರಾಜ್

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2020, 9:31 IST
Last Updated 6 ಫೆಬ್ರುವರಿ 2020, 9:31 IST
   

ಬೆಂಗಳೂರು:ಯಾರಿಗೆ ಮಾತು ಕೊಟ್ಟಿದ್ದಾರೋ ಅದನ್ನು ಉಳುಸಿಕೊಳ್ಳುವ ಗುಣಲಕ್ಷಣಯಡಿಯೂರಪ್ಪ ಅವರಿಗೆ ಇದೆ, ಮುಂದೊಂದುದಿನ ನಾನೂ ಸಚಿವನಾಗಲಿದ್ದೇನೆ ಎಂದುಎಂ.ಟಿ.ಬಿ. ನಾಗರಾಜ್ ಹೇಳಿದರು.

ನನಗೂ ಮಂತ್ರಿ ಸ್ಥಾನ ಸಿಗಬೇಕು ಎಂಬುದು ನನ್ನ ಕ್ಷೇತ್ರದ ಜನತೆಯ ಬಯಕೆ, ಯಡಿಯೂರಪ್ಪ ಅವರು ಕೊಟ್ಟ ಮಾತನ್ನು ಮರೆಯುವವರಲ್ಲ ಎಂದು ಮಾಧ್ಯಮದವರಿಗೆ ತಿಳಿಸಿದರು.

ನನಗೂ ಕಾರ್ಯಕ್ರಮಕ್ಕೆ ಯಡಿಯೂರಪ್ಪ ಅವರೇ ಆಹ್ವಾನ ನೀಡಿದ್ದರು. ಆದರೆ ಸ್ಥಳೀಯ ಚುನಾವಣೆ ಕಾರಣಕ್ಕೆ ಬರಲು ಸಾಧ್ಯವಾಗಲಿಲ್ಲ. ನೂತನ ಸಚಿವರಿಗೆ ಶುಭ ಕೋರುತ್ತೇನೆ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.