ರಾಮನಗರ: ಈಗಲ್ಟನ್ರೆಸಾರ್ಟ್ನಲ್ಲಿ ಶಾಸಕರಿಬ್ಬರ ಗಲಾಟೆ ಹಿನ್ನೆಲೆಯಲ್ಲಿ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ರೆಸಾರ್ಟಿಗೆ ಭೇಟಿ ನೀಡಿದ್ದು, ಶಾಸಕರಿಂದ ಮಾಹಿತಿ ಪಡೆಯುತ್ತಿದ್ದಾರೆ.
'ನಿನ್ನೆ ರಾತ್ರಿ ಸಭೆಯ ಬಳಿಕ ರೆಸಾರ್ಟಿನಿಂದ ತೆರಳಿದ್ದೆ. ಶಾಸಕರ ಗಲಾಟೆ ವಿಷಯ ಮಾಧ್ಯಮಗಳಿಂದ ತಿಳಿಯಿತು. ಈ ಬಗ್ಗೆ ವಿಚಾರಿಸುತ್ತೇನೆ' ಎಂದು ಪರಮೇಶ್ವರ ಹೇಳಿದರು.
ದಿನೇಶ್ ಗುಂಡೂರಾವ್ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.