ADVERTISEMENT

ಬಂಧಿಸಲಿ, ನೇಣಿಗೆ ಹಾಕಲಿ, ಅರಗಿಸಿಕೊಳ್ಳುವೆ: ಎಂ.ಪಿ.ರೇಣುಕಾಚಾರ್ಯ

ತಮ್ಮ ವಿರುದ್ಧ ಕಾಂಗ್ರೆಸ್ ಮುಖಂಡರು ನೀಡಿರುವ ದೂರನ್ನು ಸ್ವಾಗತಿಸಿದ ಶಾಸಕ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2020, 14:42 IST
Last Updated 12 ಏಪ್ರಿಲ್ 2020, 14:42 IST
ಎಂ.ಪಿ.ರೇಣುಕಾಚಾರ್ಯ
ಎಂ.ಪಿ.ರೇಣುಕಾಚಾರ್ಯ   

ದಾವಣಗೆರೆ: ‘ನನ್ನನ್ನು ಬಂಧಿಸಲಿ, ನೇಣಿಗೆ ಹಾಕಲಿ. ಕಾಂಗ್ರೆಸ್ ಮುಖಂಡರು‌ ನನ್ನ ವಿರುದ್ಧ ದೂರು ದಾಖಲಿಸಿದ್ದನ್ನು ಸ್ವಾಗತಿಸುತ್ತೇನೆ’ ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದರು.

ಮಾಧ್ಯಮದವರ ಜೊತೆ ಮಾತನಾಡಿದ ಅವರು, ‘ನನ್ನ ಹೇಳಿಕೆ ಬಗ್ಗೆ ಈಗ ಏನೂ ಹೇಳಲ್ಲ. ಕಾಂಗ್ರೆಸ್‌ನವರ ದೂರಿನ ಬಗ್ಗೆ ಮಾತ್ರ ಹೇಳುವೆ. ಯಾರು ಏನೇ ಮಾಡಲಿ ನನಗೆ ಅರಗಿಸಿಕೊಳ್ಳುವ ಶಕ್ತಿಯನ್ನು ದೇವರು ಕೊಟ್ಟಿದ್ದಾನೆ’ ಎಂದರು.

‘ನಾನು ಮುಸ್ಲಿಂ ವಿರೋಧಿಯಲ್ಲ. ಹೊನ್ನಾಳಿಯಲ್ಲಿ ಮುಸ್ಲಿಮರೇ ಹೆಚ್ಚಾಗಿ ಇರುವ ಪ್ರದೇಶಗಳಿಗೆ ಹೋಗಿದ್ದೇನೆ. ಅವರು ನಮಾಜ್ ಮಾಡುವುದಿಲ್ಲ ಎಂದು ಬರೆದುಕೊಟ್ಟಿದ್ದಾರೆ. ಬೇಕಾದವರು ಬೇಕಾದಷ್ಟು ಕೇಸ್ ಹಾಕಲಿ, ಅದನ್ನು ಸ್ವಾಗತಿಸುವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.