ADVERTISEMENT

ರಾಜ್ಯಪಾಲರೇ ಅರ್ಜಿದಾರರ ವಿಚಾರಣೆ ನಡೆಸುವುದಾದರೆ ಕೋರ್ಟ್ ಯಾಕೆ ಬೇಕು?: ಹಿಟ್ನಾಳ್

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2024, 7:08 IST
Last Updated 17 ಆಗಸ್ಟ್ 2024, 7:08 IST
<div class="paragraphs"><p>ರಾಜಶೇಖರ್ ಹಿಟ್ನಾಳ್ </p></div>

ರಾಜಶೇಖರ್ ಹಿಟ್ನಾಳ್

   

ಹೊಸಪೇಟೆ (ವಿಜಯನಗರ): ಮುಡಾ ಹಗರಣಕ್ಕೆ ಸಂಬಂಧಿಸಿ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ನೀಡುವುದಲ್ಲದೇ, ರಾಜ್ಯಪಾಲರೇ ಅರ್ಜಿದಾರರ ವಿಚಾರಣೆಯೂ ನಡೆಸುವುದಾದರೆ ಕೋರ್ಟ್ ಯಾಕೆ‌ ಬೇಕು. ರಾಜ್ಯಪಾಲರು ವಿಚಾರಣೆ ನಡೆಸಬಹುದು ಎಂಬುದು ಯಾವ ಕಾನೂನಿನಲ್ಲಿದೆ ಎಂದು ಕೊಪ್ಪಳ ಸಂಸದ ರಾಜಶೇಖರ್ ಹಿಟ್ನಾಳ ಪ್ರಶ್ನಿಸಿದರು.

ಇಲ್ಲಿಗೆ ಸಮೀಪದ ತುಂಗಭದ್ರಾ ಅಣೆಕಟ್ಟೆಯ ಕೆಳಭಾಗದ ನಡುಗಡ್ಡೆಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿಅ ಅವರು, ರಾಜ್ಯಪಾಲರು ಕಾನೂನಾತ್ಮಕವಾಗಿ‌ ನಡೆದುಕೊಳ್ಳುತ್ತಿಲ್ಲ. ಮುಡಾ ಆರೋಪ ಆಧಾರರಹಿತ ಎಂಬುದು ಸಾಮಾನ್ಯರಿಗೂ ಗೊತ್ತಿದೆ. ಆದರೂ, ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿ, ಬಿಜೆಪಿಯ ಕೈಗೊಂಬೆಯಂತೆ ನಡೆದು ಕೊಳ್ಳುತ್ತಿದ್ದಾರೆ.‌ ರಾಜಭವನ ದುರುಪಯೋಗ ಆಗುತ್ತಿದೆ‌‌ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ಮುಖ್ಯಮಂತ್ರಿ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದನ್ನು ಪ್ರಶ್ನಿಸಿ ಕಾನೂನು ಹೋರಾಟ‌ ನಡೆಸಲಾಗುತ್ತದೆ.‌ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾರ್ಗದರ್ಶನದಲ್ಲಿ ರಾಜ್ಯದ ಎಲ್ಲ‌‌ ಕಾಂಗ್ರೆಸ್ ಸಂಸದರು ಸೇರಿ ‌ಸಂಸತ್ ಭವನ‌ ಎದುರು ಧರಣಿ ನಡೆಸುವುದಾಗಿ ತಿಳಿಸಿದರು.

ಮುಡಾ ವಿಚಾರವಾಗಿ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದಕ್ಕೆ ಸಿಎಂ‌ ರಾಜೀನಾಮೆ ನೀಡುವ ಅಗತ್ಯವಿಲ್ಲ.‌

ಕಾರ್ನಾಟಕ ಸೇರಿದಂತೆ ದೇಶದ ಇತರೆ ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ಬಿಜೆಪಿಯೇತರ ಪಕ್ಷಗಳ ಸರ್ಕಾರಗಳ‌ನ್ನು ಅಸ್ಥಿರಗೊಳಿಸಲು ಬಿಜೆಪಿ ನಿರಂತರ‌ ಪ್ರಯತ್ನ‌ ನಡೆಸುತ್ತಿದೆ ಎಂದು ಅವರು ಆರೋಪಿಸಿದರು.

ಈ‌ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಹಟ್ಟಿ ಭರಮಪ್ಪ, ಉಮೇಶ ಮಂಗಳೂರು ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.