ಮೈಸೂರು: ಮುಂಜಾನೆ ಸೂರ್ಯನ ಕಿರಣಗಳು ಬೀಳುವ ಹೊತ್ತಾಗಿತ್ತು. ಚಾಮುಂಡಿಬೆಟ್ಟದ ಬೃಹತ್ ನಂದಿ ವಿಗ್ರಹಕ್ಕೆ ಹಾಲು, ಮೊಸರು, ಬಿಲ್ವ ಪತ್ರೆಗಳು, ಅರಿಸಿನ, ಕುಂಕುಮ ಅಭಿಷೇಕ ಮಾಡಲಾಯಿತು.
ಮೆಟ್ಟಿಲು ಹತ್ತುವ ಬಳಗವು ಕಾರ್ತಿಕ ಸೋಮವಾರದ ಪ್ರಯುಕ್ತ ನಡೆಸಿದ ಮಹಾರುದ್ರಾಭಿಷೇಕದಲ್ಲಿ ಚಾಮುಂಡಿಬೆಟ್ಟದ ನಂದಿ ವಿಗ್ರಹವು ವಿವಿಧ ವರ್ಣಗಳಲ್ಲಿ ಕಂಗೊಳಿಸಿತು.
ಒಮ್ಮೆ ಶ್ವೇತ ವರ್ಣದಲ್ಲಿ ಕಂಡರೆ, ಮತ್ತೊಮ್ಮೆ ಕೆಂಪು, ಅರಿಸಿಣದ ಬಣ್ಣಗಳಲ್ಲಿ ಮೈದೋರಿತು. ನಂತರ, ಫಲಾಭಿಷೇಕವನ್ನು ನೆರವೇರಿಸಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.