ರಾಮನಗರ: ಇಲ್ಲಿನ ಟಿಪ್ಪುನಗರ ಬಳಿ ರಾಜಕಾಲುವೆಯಲ್ಲಿ ಬುಧವಾರ ರಾಷ್ಟ್ರೀಯ ತನಿಖಾ ದಳ (ಎನ್ಐಎ) ನೇತೃತ್ವದ ತಂಡವು ಶೋಧ ಕಾರ್ಯ ನಡೆಸಿದ್ದು, ಬಾಂಬ್ನಂತಹ ವಸ್ತುಗಳು ಪತ್ತೆಯಾಗಿವೆ.
ದೊಡ್ಡಬಳ್ಳಾಪುರದಲ್ಲಿ ಮಂಗಳವಾರ ಬಂಧಿತನಾದ ಶಂಕಿತ ಉಗ್ರ ಹಬೀಬುಲ್ಲಾನನ್ನು ಎನ್ಐಎ ಅಧಿಕಾರಿಗಳು ಬೆಳಿಗ್ಗೆ ರಾಮನಗರಕ್ಕೆ ಕರೆ ತಂದು ವಿವಿಧೆಡೆ ಶೋಧ ಕಾರ್ಯ ನಡೆಸಿದ್ದಾರೆ. ಈ ವೇಳೆ ಬಾಂಬ್ನಂತಹ ಕಚ್ಚಾ ಸಾಮಗ್ರಿಗಳು ದೊರೆತವು ಎನ್ನಲಾಗಿದೆ.
ಇದನ್ನೂ ಓದಿ:ಪಶ್ಚಿಮ ಬಂಗಾಳ ಬಾಂಬ್ ಸ್ಫೋಟ ಪ್ರಕರಣ: ದೊಡ್ಡಬಳ್ಳಾಪುರದಲ್ಲಿ ಶಂಕಿತ ಉಗ್ರ ಸೆರೆ
ಸದ್ಯ ತಪಾಸಣೆ ಮುಂದುವರಿದಿದ್ದು, ಬಾಂಬ್ನಂತಹ ವಸ್ತುಗಳು ಪತ್ತೆಯಾದ ಪ್ರದೇಶಕ್ಕೆ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.