ಬೆಂಗಳೂರು: ವೀಯೆಲ್ಲೆನ್–ನಿರ್ಮಾಣ್ ಪುರಂದರ ಪ್ರತಿಷ್ಠಾನ ಕೊಡಮಾಡುವ ‘ನಿರ್ಮಾಣ್–ಪುರಂದರ ಸಂಗೀತ ರತ್ನ ಪ್ರಶಸ್ತಿ’ಗೆ ಪಂಡಿತ್ ಎಂ.ವೆಂಕಟೇಶ್ ಕುಮಾರ್ ಆಯ್ಕೆಯಾಗಿದ್ದಾರೆ.
ಪ್ರತಿಷ್ಠಾನದಿಂದ ಕೊಡಮಾಡುತ್ತಿರುವ 12ನೇ ವರ್ಷದ ಪ್ರಶಸ್ತಿ ಇದಾಗಿದೆ. ಪ್ರಶಸ್ತಿಯು ₹ 1 ಲಕ್ಷದ ಒಂದು ನಗದು ಹಾಗೂ ಪುರಂದರದಾಸರ ಚಿತ್ರವಿರುವ ಸುವರ್ಣ ಫಲಕವನ್ನೊಳಗೊಂಡ ಸ್ವರ್ಣಹಾರವನ್ನು ಒಳಗೊಂಡಿದೆ.
ಫೆಬ್ರವರಿ 14 ರಂದು ಸಂಜೆ 6 ಗಂಟೆಗೆ ಬನ್ನೇರುಘಟ್ಟದ ನಿಸರ್ಗ ಬಡಾವಣೆಯ ಪುರಂದರ ಮಂಟಪದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗಿದೆ. ಪ್ರತಿಷ್ಠಾನವು 2010 ರಿಂದ ಈ ಪ್ರಶಸ್ತಿಯನ್ನು ನೀಡುತ್ತಿದೆ ಎಂದು ವ್ಯವಸ್ಥಾಪಕ ವಿಶ್ವಸ್ಥ ವಿ.ಲಕ್ಷ್ಮೀನಾರಾಯಣ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.