ADVERTISEMENT

ಬೆಲೆ ಕುಸಿತ: ಐದು ಎಕರೆ ಈರುಳ್ಳಿ ಬೆಳೆ ನಾಶಪಡಿಸಿದ ರೈತ..!

ಮನನೊಂದ ಬೆಳೆಗಾರನಿಂದಲೇ ಕೃತ್ಯ

ಬಸವರಾಜ ಹಲಕುರ್ಕಿ
Published 22 ಮೇ 2020, 1:57 IST
Last Updated 22 ಮೇ 2020, 1:57 IST
ನರಗುಂದ ತಾಲ್ಲೂಕಿನ ರಡ್ಡೇರನಾಗನೂರಿನ ರೈತ ವೆಂಕನಗೌಡ ಪಾಟೀಲ ಈರುಳ್ಳಿ ಬೆಳೆಯನ್ನು ಟ್ರಾಕ್ಟರ್‌ನಿಂದ ನಾಶಪಡಿಸಿದರು
ನರಗುಂದ ತಾಲ್ಲೂಕಿನ ರಡ್ಡೇರನಾಗನೂರಿನ ರೈತ ವೆಂಕನಗೌಡ ಪಾಟೀಲ ಈರುಳ್ಳಿ ಬೆಳೆಯನ್ನು ಟ್ರಾಕ್ಟರ್‌ನಿಂದ ನಾಶಪಡಿಸಿದರು   

ನರಗುಂದ: ಬೆಲೆ ಕುಸಿತದಿಂದ ನೊಂದ ತಾಲ್ಲೂಕಿನ ರಡ್ಡೇರನಾಗನೂರು ಗ್ರಾಮದ ರೈತ ವೆಂಕನಗೌಡ ಪಾಟೀಲ 5 ಎಕರೆಯಲ್ಲಿ ಬೆಳೆದಿದ್ದ, ಕಟಾವಿಗೆ ಬಂದಿದ್ದ ಅಂದಾಜು 300 ಕ್ವಿಂಟಲ್‌ನಷ್ಟು ಈರುಳ್ಳಿಯನ್ನು ಟ್ರಾಕ್ಟರ್‌ನಿಂದ ನಾಶಪಡಿಸಿದ್ದಾರೆ.

ಲಾಕ್‌ಡೌನ್‌ ಸಡಿಲಿಕೆ ನಂತರ ಈರುಳ್ಳಿ ಕೀಳಲು ಮುಂದಾಗಿದ್ದರು. ವ್ಯಾಪಾರಿಗಳು ಕ್ವಿಂಟಲ್‌ಗೆ ಗರಿಷ್ಠ ₹500ಕ್ಕೆ ಕೇಳಿದರು. ಕೃಷಿಗೆ ಸುಮಾರು ₹2 ಲಕ್ಷ ಖರ್ಚು ವ್ಯಯಿಸಿದ್ದ ಅವರು, ಬೆಲೆ ಕುಸಿತದಿಂದ ಹತಾಶರಾಗಿ ಇಡೀ ಬೆಳೆಯನ್ನೇ ಹರಗಿ ನಾಶಪಡಿಸಿದರು.

‘ಲಾಕ್‌ಡೌನ್‌ ಇದ್ದಿದ್ದರಿಂದ 3 ತಿಂಗಳಿಂದ ಈರುಳ್ಳಿ ಕಿತ್ತಿರಲಿಲ್ಲ. ಬೆಲೆ ಏರುವ ನಿರೀಕ್ಷೆ ಇತ್ತು. ವ್ಯಾಪಾರಿಗಳು ಕೆ,ಜಿಗೆ ₹5ರಂತೆ ಕೇಳುತ್ತಾರೆ. ರೈತರ ಸಂಕಷ್ಟವನ್ನು ಯಾರೂ ಕೇಳುತ್ತಿಲ್ಲ’ ಎಂದೂ ಅವರು ನೋವು ತೋಡಿಕೊಂಡರು.

ADVERTISEMENT

‘ಸರ್ಕಾರ ಪರಿಹಾರ ನೀಡಬೇಕು’ ಎಂದು ರೈತ ಸಂಘದ ಅಧ್ಯಕ್ಷ ವಿಠ್ಠಲ ಜಾಧವ ಆಗ್ರಹಿಸಿದರು. ‘ಬೆಳೆಹಾನಿ ಪರಿಹಾರ ಘೋಷಣೆಯಾಗಿದೆ. ಇನ್ನೂ ಮಾರ್ಗಸೂಚಿ ಬಂದಿಲ್ಲ. ಬಂದ ನಂತರ ಬೆಳೆಗಾರರಿಗೆ ನೆರವಾಗಲು ಒತ್ತು ನೀಡಲಾಗುವುದು’ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿ ಸಂಜೀವ ಚವ್ಹಾಣ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.