ADVERTISEMENT

ಪ್ರಜಾವಾಣಿ–ವೀರಲೋಕ: ಯುಗಾದಿ ನಾಟಕ ರಚನಾ ಸ್ಪರ್ಧೆ; ಭರ್ಜರಿ ನಗದು ಬಹುಮಾನ ಗೆಲ್ಲಿ

​ಪ್ರಜಾವಾಣಿ ವಾರ್ತೆ
Published 2 ಜನವರಿ 2025, 10:30 IST
Last Updated 2 ಜನವರಿ 2025, 10:30 IST
<div class="paragraphs"><p>ಪ್ರಜಾವಾಣಿ–ವೀರಲೋಕ: ಯುಗಾದಿ ನಾಟಕ ರಚನಾ ಸ್ಪರ್ಧೆ</p></div>

ಪ್ರಜಾವಾಣಿ–ವೀರಲೋಕ: ಯುಗಾದಿ ನಾಟಕ ರಚನಾ ಸ್ಪರ್ಧೆ

   

ಬೆಂಗಳೂರು: ಪ್ರಜಾವಾಣಿ ಮತ್ತು ವೀರಲೋಕ ಪುಸ್ತಕ ಸಂಸ್ಥೆಯು ಯುಗಾದಿ ನಾಟಕ ರಚನಾ ಸ್ಪರ್ಧೆ(2025)ಗೆ ಅರ್ಜಿಗಳನ್ನು ಆಹ್ವಾನಿಸಿದೆ. ನಾಟಕಗಳನ್ನು ಕಳುಹಿಸಲು ಫೆಬ್ರುವರಿ 28 ಕೊನೆಯ ದಿನವಾಗಿದೆ.

ಮೊದಲನೇ ಬಹುಮಾನ ₹ 25,000, ಎರಡನೇ ಬಹುಮಾನ ₹ 15,000, ಮೂರನೇ ಬಹುಮಾನ ₹ 10,000 ಹಾಗೂ ತೀರ್ಪುಗಾರರ ಮೆಚ್ಚುಗೆ ಪಡೆದ ಇತರೆ ಐದು ನಾಟಕಗಳಿಗೆ ತಲಾ ₹ 5,000 ನೀಡಲಾಗುವುದು. 

ADVERTISEMENT

ಸ್ಪರ್ಧೆಯ ನಿಯಮಗಳು

  • ವಸ್ತುವಿನ ಆಯ್ಕೆಗೆ ಯಾವುದೇ ನಿರ್ಬಂಧಗಳಿಲ್ಲ.

  • ನಾಟಕವು ಕನ್ನಡ ಭಾಷೆಯಲ್ಲಿನ ಸ್ವತಂತ್ರ ರಚನೆಯಾಗಿರಬೇಕು. ಯಾವುದೇ ಭಾಷೆಯ ಅನುವಾದವಾಗಿರಬಾರದು. ಈ ಮೊದಲು ಮಾಧ್ಯಮಗಳಲ್ಲಿ ಪ್ರಕಟ ಅಥವಾ ಪ್ರಸಾರವಾಗಿರಬಾರದು.

  • ರಚನೆ ಮೂರು ಅಂಕದ್ದಾಗಿರಬೇಕು.

  • ನಾಟಕೀಯತೆ ಪ್ರಧಾನ ಗುಣವಾಗಿರಬೇಕು.

  • ರಚನೆಯನ್ನು ಕಡ್ಡಾಯವಾಗಿ ಟೈಪ್‌ ಮಾಡಿ ಎರಡು ಪ್ರತಿಗಳನ್ನು ಕಳುಹಿಸಬೇಕು.

  • ಎ–4 ಅಳತೆಯಲ್ಲಿ 45 ರಿಂದ 50 ಪುಟಗಳ ಮಿತಿಯಲ್ಲಿರಬೇಕು. ಫಾಂಟ್‌ ಸೈಜ್‌ 12 ಇರಬೇಕು.

  • ಪ್ರತ್ಯೇಕ ಪುಟದಲ್ಲಿ ಹೆಸರು, ಅಂಚೆ ವಿಳಾಸ, ಮೊಬೈಲ್‌ ನಂಬರ್‌, ಇ–ಮೇಲ್‌ ವಿಳಾಸ ಒದಗಿಸಬೇಕು. ಇತ್ತೀಚಿನ ಪಾಸ್‌ಪೋರ್ಟ್‌ ಅಳತೆಯ ವರ್ಣ ಭಾವಚಿತ್ರದೊಂದಿಗೆ ಕಿರು ಪರಿಚಯವನ್ನು ಕಳುಹಿಸಬೇಕು.

  • ಪ್ರವೇಶಗಳ ಲಕೋಟೆಯ ಮೇಲೆ ‘ಪ್ರಜಾವಾಣಿ ಯುಗಾದಿ ನಾಟಕ ರಚನಾ ಸ್ಪರ್ಧೆ’ಗಾಗಿ ಎಂದು ಸ್ಪಷ್ಟವಾಗಿ ಬರೆಯಬೇಕು.

  • ದಿ ಪ್ರಿಂಟರ್ಸ್‌ (ಮೈಸೂರು) ಪ್ರೈವೇಟ್‌ ಲಿಮಿಟೆಡ್‌ನ ಸಿಬ್ಬಂದಿ ಹಾಗೂ ಅವರ ಕುಟುಂಬದವರು ಸ್ಪರ್ಧೆಯಲ್ಲಿ ಭಾಗವಹಿಸುವಂತಿಲ್ಲ.

  • ಸ್ಪರ್ಧೆಗೆ ಕಳುಹಿಸಿದ ರಚನೆಗಳನ್ನು ಹಿಂದಿರುಗಿಸುವುದಿಲ್ಲ.

  • ಬಹುಮಾನಿತ ನಾಟಕಗಳನ್ನು ಯಾವುದೇ ಸ್ವರೂಪದಲ್ಲಿ ಯಾವಾಗ ಬೇಕಾದರೂ ಬಳಸುವ ಹಕ್ಕುಗಳನ್ನು ದಿ ಪ್ರಿಂಟರ್ಸ್‌ (ಮೈಸೂರು) ಪ್ರೈವೇಟ್‌ ಲಿಮಿಟೆಡ್‌ ಕಾಯ್ದಿರಿಸಿಕೊಂಡಿದೆ.

  • ಸಂಪಾದಕರ ತೀರ್ಮಾನವೇ ಅಂತಿಮ.

ಬಹುಮಾನ...

ಮೊದಲನೇ ಬಹುಮಾನ ₹ 25,000
ಎರಡನೇ ಬಹುಮಾನ ₹ 15,000
ಮೂರನೇ ಬಹುಮಾನ ₹ 10,000
ತೀರ್ಪುಗಾರರ ಮೆಚ್ಚುಗೆ ಪಡೆದ ಇತರೆ ಐದು ನಾಟಕಗಳಿಗೆ ತಲಾ ₹ 5,000

ಪ್ರವೇಶಗಳು ತಲುಪಲು ಕೊನೆಯ ದಿನಾಂಕ: ಫೆಬ್ರುವರಿ 28, 2025

ವಿಳಾಸ: ಸಂಪಾದಕರು, ಪ್ರಜಾವಾಣಿ ಯುಗಾದಿ ನಾಟಕ ರಚನಾ ಸ್ಪರ್ಧೆ ವಿಭಾಗ
ಪ್ರಜಾವಾಣಿ, ನಂ.75, ಮಹಾತ್ಮಗಾಂಧಿ ರಸ್ತೆ, ಬೆಂಗಳೂರು–560001

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.