ಕಾರವಾರ:ತಾಲ್ಲೂಕಿನ ಚೆಂಡಿಯಾ ಐಸ್ ಫ್ಯಾಕ್ಟರಿ ಬಳಿ ಗುರುವಾರ ಬೆಳಗಿನ ಜಾವ ಸುರಿದ ಮಳೆ, ಗಾಳಿಯಿಂದಾಗಿಮನೆಯೊಂದಕ್ಕೆ ಹಾನಿಯಾಗಿದೆ.
ಅನಿತಾ ಪ್ರಕಾಶ ತಳೇಕರ್ ಎಂಬುವವರ ಹೆಂಚಿನ ಮನೆಯ ಚಾವಣಿಗೆ ಹಾನಿಯಾಗಿದೆ. 200 ಹೆಂಚುಗಳು ಪುಡಿಯಾಗಿದ್ದು, 12 ಪಕಾಸು ಮುರಿದಿವೆ. ಮನೆಯ ಎದುರಿನ ಭಾಗಕ್ಕೆ ಹೊದಿಸಿದ್ದ ಆರು ಶೀಟುಗಳು ಜಖಂಗೊಂಡಿವೆ.
ಸುಮಾರು ₹ 35 ಸಾವಿರ ಮೌಲ್ಯದಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಕಂದಾಯ ನಿರೀಕ್ಷಕ ಶ್ರೀಧರ ನಾಯ್ಕ ಹಾಗೂ ಗ್ರಾಮ ಲೆಕ್ಕಾಧಿಕಾರಿ ವಿ.ಕೆ.ನಾಯ್ಕ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.