ಬೆಂಗಳೂರು: ‘ನನ್ನನ್ನು ಹೀರೊ ಮಾಡಿದ್ರಿ, ವಿಲನ್ ಕೂಡ ಮಾಡಿದ್ರಿ, ಕೊನೆಗೆ ಏಕಾಂಗಿಮಾಡಿದ್ರಿ’ ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ಮಾಧ್ಯಮಗಳ ವಿರುದ್ಧ ಕಿಡಿಕಾರಿದ್ದಾರೆ.
‘ಪಕ್ಷದಲ್ಲಿ ಅಸಮಾಧಾನ ಇರುವುದು ನಿಜ. ಹೈಕಮಾಂಡ್ಗೆ ನಾವೇನೂ ಚಾಲೆಂಜ್ ಮಾಡಿಲ್ಲ’ ಎಂದು ಹೇಳಿದರು.
ನನ್ನ ಮಗಳ ಮದುವೆ ಇದೆ. ನನ್ನ ಸಂಬಂಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮುಂಬೈನಲ್ಲಿದ್ದಾರೆ ಹಾಗಾಗಿ ನಾನು ಮತ್ತೆ ಮುಂಬೈಗೆ ಹೋಗುತ್ತೇನೆ ಎಂದು ತಿಳಿಸಿದ್ದಾರೆ.
‘ಬಿಜೆಪಿ ಶಾಸಕ ಅಶ್ವತ್ಥನಾರಾಯಣ ಅವರು ನನ್ನ ಮಿತ್ರರು. ಅವರ ಮನೆಗೆ ಹೋಗ್ತೇನೆ ಏನೀವಾಗ? ಯಾರೂ ಮನೆಗೂ ಹೋಗ್ಬಾರ್ದಾ? ಎಲ್ಲಾ ನೀವೇ ಹೇಳ್ತೀರಾ, ನೀವೇ ಮಾಡ್ತಿರಾ? ನೀವೇನೂ ಜಡ್ಜ್ಗಳಲ್ಲ’ ಎಂದು ಪ್ರಶ್ನಿಸಿದರು.
ರಾಜಕಾರಣಿಗಳು ನಾವೆಲ್ಲಾ ಮಿತ್ರರು. ನಮಗೆ ಬಿಜೆಪಿಯಲ್ಲೂ ಮಿತ್ರರಿದ್ದಾರೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.