ADVERTISEMENT

ಆರ್‌ಆರ್‌ ನಗರ ಉಪಚುನಾವಣೆ: ಬೆಂಗಳೂರಿನ ಈ ಭಾಗದಲ್ಲಿ ನ.1-3, ನ.10ರಂದು ಮದ್ಯ ಇಲ್ಲ

ಏಜೆನ್ಸೀಸ್
Published 29 ಅಕ್ಟೋಬರ್ 2020, 13:17 IST
Last Updated 29 ಅಕ್ಟೋಬರ್ 2020, 13:17 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಬೆಂಗಳೂರು: ರಾಜರಾಜೇಶ್ವರಿ ನಗರ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆಯಲ್ಲಿ ಬೆಂಗಳೂರಿನ ಕೆಲ ಸ್ಥಳಗಳಲ್ಲಿ ನ.1 ರಿಂದ 3 ಮತ್ತು ಫಲಿತಾಂಶದ ದಿನವಾದ ನ. 10ರಂದು ಮದ್ಯ ನಿಷೇಧಿಸಲಾಗಿದೆ.

ಈ ಬಗ್ಗೆ ಬೆಂಗಳೂರು ನಗರ ಪೊಲೀಸ್‌ ಆಯುಕ್ತರು ಪ್ರಕಟಣೆ ನೀಡಿದ್ದು, ನಿಗದಿತ ಪ್ರದೇಶಗಳಲ್ಲಿ ಮದ್ಯ ಮತ್ತು ಅಮಲೇರಿಸುವ ಪದಾದರ್ಥಗಳ ಮಾರಾಟ, ಸೇವನೆ, ಸಂಗ್ರಹಣೆಯನ್ನು ನಿಷೇಧಿಸಿರುವುದಾಗಿ ಹೇಳಿದ್ದಾರೆ.

ನ.1ರ ಸಂಜೆ 5ರಿಂದ, ನ.3ರ ರಾತ್ರಿ 12ರ ವರೆಗೆ ಮತ್ತು ನ. 10ರ ಮುಂಜಾನೆ 6ರಿಂದ, 10ರ ರಾತ್ರಿ 12ರ ವರೆಗೆ ಮದ್ಯ ಮಾರಾಟ ಇರುವುದಿಲ್ಲ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

ADVERTISEMENT

ಯಾವ ಸ್ಥಳಗಳಲ್ಲಿ ಮದ್ಯವಿಲ್ಲ?
ಯಶವಂತಪುರ, ಆರ್‌ಎಂಸಿ ಯಾರ್ಡ್‌, ರಾಜಗೋಪಾಲ ನಗರ, ಪೀಣ್ಯ, ನಂದಿನಿ ಲೇಔಟ್‌, ಮಹಾಲಕ್ಷ್ಮೀ ಲೇಔಟ್‌, ಜಾಲಹಳ್ಳಿ, ಗಂಗಮ್ಮನಗುಡಿ, ರಾಜರಾಜೇಶ್ವರಿ ನಗರ, ಕಾಮಾಕ್ಷಿಪಾಳ್ಯ, ಜ್ಞಾನಭಾರತಿ, ಬ್ಯಾಟರಾಯನಪುರ, ಅನ್ನಪೂರ್ಣೇಶ್ವರಿ ನಗರ, ಗಿರಿನಗರ ಪೊಲೀಸ್‌ ಠಾಣೆ ಪ್ರದೇಶ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.