ADVERTISEMENT

ನೂತನ ಯತಿ ವೇದವರ್ಧನ ತೀರ್ಥ ಸ್ವಾಮೀಜಿ

ಶೀರೂರು ಮಠದ ಉತ್ತರಾಧಿಕಾರಿ ಪಟ್ಟಾಭಿಷೇಕ

​ಪ್ರಜಾವಾಣಿ ವಾರ್ತೆ
Published 14 ಮೇ 2021, 19:31 IST
Last Updated 14 ಮೇ 2021, 19:31 IST
ನೂತನ ಯತಿಯ ಶಿರದ ಮೇಲೆ ಹರಿವಾಣದಲ್ಲಿ ಶೀರೂರು ಮಠದ ಉಪಾಸ್ಯಮೂರ್ತಿ ಸಹಿತ ಸಾಲಿಗ್ರಾಮನ್ನು ಇರಿಸಿ ಪಟ್ಟಾಭಿಷೇಕ ನೆರವೇರಿಸಲಾಯಿತು
ನೂತನ ಯತಿಯ ಶಿರದ ಮೇಲೆ ಹರಿವಾಣದಲ್ಲಿ ಶೀರೂರು ಮಠದ ಉಪಾಸ್ಯಮೂರ್ತಿ ಸಹಿತ ಸಾಲಿಗ್ರಾಮನ್ನು ಇರಿಸಿ ಪಟ್ಟಾಭಿಷೇಕ ನೆರವೇರಿಸಲಾಯಿತು   

ಹಿರಿಯಡಕ (ಉಡುಪಿ): ಅಷ್ಟಮಠಗಳಲ್ಲಿ ಒಂದಾಗಿರುವ ಶೀರೂರು ಮಠದ ಉತ್ತರಾಧಿಕಾರಿಯ ಪಟ್ಟಾಭಿಷೇಕ ಶುಕ್ರವಾರ ನೆರವೇರಿತು. 16 ವರ್ಷದ ಅನಿರುದ್ಧ ಸರಳತ್ತಾಯ ಅವರಿಗೆ ವೇದವರ್ಧನ ತೀರ್ಥ ಸ್ವಾಮೀಜಿ ಎಂದು ಮರು ನಾಮಕರಣ ಮಾಡಲಾಯಿತು. ಅವರು ಶೀರೂರು ಮಠದ 31ನೇ ಯತಿಯಾಗಿದ್ದಾರೆ.

ಮಧ್ಯಾಹ್ನ 12.45ಕ್ಕೆ ಹಿರಿಯಡಕದ ಶೀರೂರು ಮೂಲಮಠದಲ್ಲಿ ಪಟ್ಟಾಭಿಷೇಕದ ವಿಧಿವಿಧಾನಗಳು ನಡೆದವು. ದ್ವಂದ್ವ ಮಠವಾದ ಸೋದೆ ವಾದಿರಾಜ ಮಠದ ವಿಶ್ವವಲ್ಲಭ ತೀರ್ಥ ಸ್ವಾಮೀಜಿ, ನೂತನ ಯತಿಗೆ ಪಟ್ಟಾಭಿಷೇಕ ಮಾಡಿದರು. ಇದಕ್ಕೂ ಮುನ್ನ ಪುರುಷಸೂಕ್ತ ಹೋಮ, ವಿರಜಾ ಹೋಮ, ವೇದವ್ಯಾಸ ಮಂತ್ರ ಹೋಮ ಸೇರಿ ಧಾರ್ಮಿಕ ವಿಧಿವಿಧಾನಗಳು ನಡೆದವು.

ನೂತನ ಯತಿ ಧರ್ಮಸ್ಥಳದ ನಿಡ್ಲೆಯವರು. ವಿದ್ವಾನ್ ಎಂ.ಉದಯಕುಮಾರ್‌ ಹಾಗೂ ವಿದ್ಯಾ ದಂಪತಿಯ ಪುತ್ರ. 10ನೇ ತರಗತಿಯವರೆಗೆ ಉಡುಪಿಯ ವಿದ್ಯೋದಯ ಶಾಲೆಯಲ್ಲಿ ಶಿಕ್ಷಣ ಪಡೆದಿದ್ದಾರೆ. ಮುಂದಿನ ವೇದಾಧ್ಯಯನವನ್ನು ಶಿರಸಿಯ ಸೋಂದಾ ಕ್ಷೇತ್ರದಲ್ಲಿ ಮಂದುವರಿಸಲಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.