ADVERTISEMENT

‘ಸುಧಾ’ ಯುಗಾದಿ ಪ್ರಬಂಧ ಸ್ಪರ್ಧೆ: ಶ್ರೀವತ್ಸ, ಬೀಚನಹಳ್ಳಿ, ಸೌಮ್ಯಾಗೆ ಬಹುಮಾನ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2023, 19:30 IST
Last Updated 11 ಮಾರ್ಚ್ 2023, 19:30 IST
ಗಂಗಾಧರ ಬೀಚನಹಳ್ಳಿ, ಕೆ.ಎಲ್. ಶ್ರೀವತ್ಸ, ಸೌಮ್ಯಾ ಭಾಗ್ವತ್
ಗಂಗಾಧರ ಬೀಚನಹಳ್ಳಿ, ಕೆ.ಎಲ್. ಶ್ರೀವತ್ಸ, ಸೌಮ್ಯಾ ಭಾಗ್ವತ್   

ಬೆಂಗಳೂರು: ಪ್ರಬಂಧಪ್ರಿಯರ ವಾರ್ಷಿಕ ಹಬ್ಬ ‘ಸುಧಾ’ ಯುಗಾದಿ ಪ್ರಬಂಧ ಸ್ಪರ್ಧೆ–2023ರ ಫಲಿತಾಂಶ ಪ್ರಕಟಗೊಂಡಿದ್ದು, ಚೆನ್ನೈ ಕನ್ನಡಿಗ ಕೆ.ಎಲ್‌. ಶ್ರೀವತ್ಸ ಅವರ ‘ನೆರಳಿಗೆಷ್ಟೊಂದು ಮುಖ!’ ಬರಹ ಪ್ರಥಮ ಬಹುಮಾನ ಪಡೆದಿದೆ.

ಮೈಸೂರಿನ ಗಂಗಾಧರ ಬೀಚನಹಳ್ಳಿ (‘ನಾನು ನಾನೆಂಬ ಮಾಯೆ’) ಹಾಗೂ ಕುಮಟಾದ ಸೌಮ್ಯಾ ಭಾಗ್ವತ್ (‘ರಥಬೀದಿಯ ರಫಿಯೂ ಮತ್ತು ಕರಿ ಕನ್ನೆಯೂ’) ಅವರ ಪ್ರಬಂಧಗಳು ಎರಡು ಮತ್ತು ಮೂರನೇ ಬಹುಮಾನ ಪಡೆದಿವೆ. ಬಹುಮಾನಿತ ಪ್ರಬಂಧಗಳಿಗೆ ಕ್ರಮವಾಗಿ ₹10,000, ₹ 8000 ಹಾಗೂ ₹ 5000 ದೊರೆಯಲಿದೆ.

‘ಬಣ್ಣದ ಬುಗುರಿಯ ಸಮಾಜವಾದ’ (ಜಿ.ವಿ. ಅರುಣ), ‘ಮಾಸದ ಚಪ್ಪಲಿಯ ನೆನಪು’ (ಲಲಿತಾ ಕೆ. ಹೊಸಪ್ಯಾಟಿ), ‘ಅಮ್ಮಾ... ಯಾರೋ ಬಂದ್ರೂ!’ (ನಳಿನಿ ಭೀಮಪ್ಪ), ‘ಬಾಲ ಪ್ರತಿಭಾ ಪೀಡನ’ (ಪಿ.ಬಿ. ಪ್ರಸನ್ನ) ಹಾಗೂ ‘ಸ್ಟೋರ್ ರೂಂ ಅಟ್ಟ ಎಂಬ ಮೂಲೆಗಳು’ (ವಿಜಯಶ್ರೀ ಎಂ. ಹಾಲಾಡಿ) ಪ್ರಬಂಧಗಳು ತೀರ್ಪುಗಾರರ ಮೆಚ್ಚುಗೆ ಪಡೆದಿವೆ.

ADVERTISEMENT

ಕವಯಿತ್ರಿ ತೇಜಶ್ರೀ ಮತ್ತು ವಿಮರ್ಶಕ ಸುರೇಶ್‌ ನಾಗಲಮಡಿಕೆ ಈ ವರ್ಷದ ಪ್ರಬಂಧ ಸ್ಪರ್ಧೆಯ ತೀರ್ಪುಗಾರರಾಗಿದ್ದರು. ನಾಲ್ಕು ನೂರಕ್ಕೂ ಹೆಚ್ಚಿನ ಪ್ರಬಂಧಗಳು ಸ್ಪರ್ಧೆಗೆ ಬಂದಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.