ADVERTISEMENT

ಯೋಗೇಶ್ವರ್ ಭಾವ ನಾಪತ್ತೆ ಪ್ರಕರಣ: ಹನೂರು ಬಳಿ ಕಾರು ಪತ್ತೆ; ಪೊಲೀಸರು ದೌಡು

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2023, 9:34 IST
Last Updated 4 ಡಿಸೆಂಬರ್ 2023, 9:34 IST
<div class="paragraphs"><p>ಚಾಮರಾಜನಗರ ಜಿಲ್ಲೆಯ ಹನೂರು ಬಳಿಯ ರಾಮಾಪುರದಲ್ಲಿ ಸೋಮವಾರ ಪತ್ತೆಯಾದ&nbsp;ಮಹಾದೇವಯ್ಯ ಅವರ ಕಾರಿನ ಕುರಿತು ಸಿ.ಪಿ.ಯೋಗೇಶ್ವರ್ ಸಮಾಲೋಚನೆ ನಡೆಸಿರು</p></div>

ಚಾಮರಾಜನಗರ ಜಿಲ್ಲೆಯ ಹನೂರು ಬಳಿಯ ರಾಮಾಪುರದಲ್ಲಿ ಸೋಮವಾರ ಪತ್ತೆಯಾದ ಮಹಾದೇವಯ್ಯ ಅವರ ಕಾರಿನ ಕುರಿತು ಸಿ.ಪಿ.ಯೋಗೇಶ್ವರ್ ಸಮಾಲೋಚನೆ ನಡೆಸಿರು

   

ಚನ್ನಪಟ್ಟಣ/ಹನೂರು: ಮೂರು ದಿನಗಳ‌ ಹಿಂದೆ ನಾಪತ್ತೆಯಾಗಿರುವ ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಅವರ ಭಾವ ಮಹಾದೇವಯ್ಯ ಅವರ ಕಾರು ಚಾಮರಾಜನಗರ ಜಿಲ್ಲೆಯ ಹನೂರು ಬಳಿಯ ರಾಮಾಪುರದಲ್ಲಿ ಸೋಮವಾರ ಪತ್ತೆಯಾಗಿದೆ.

ವಿಷಯ ತಿಳಿಯುತ್ತಿದ್ದಂತೆ, ಸ್ಥಳಕ್ಕೆ ಯೋಗೇಶ್ವರ್ ಅವರು ಭೇಟಿ ನೀಡಿದ್ದಾರೆ. ಭಾನುವಾರ ತಡ ರಾತ್ರಿಯಿಂದ ಮಹಾದೇವಯ್ಯ ಅವರು ಬಳಸುತ್ತಿದ್ದ ಕಾರು ರಾಮಾಪುರದ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ ನಿಂತಿದೆ.

ADVERTISEMENT

ಸ್ಥಳಕ್ಕೆ ಸಿಪಿಐ ಭೇಟಿ ಕೊಟ್ಟು ಮಾಹಿತಿ ಕಲೆ ಹಾಕುತ್ತಿದ್ದಾರೆ. ಚನ್ನಪಟ್ಟಣ ಪೊಲೀಸರು ಕೂಡ ಸ್ಥಳಕ್ಕೆ ಬಂದಿದ್ದು, ಬೆರಳಚ್ಚು ತಜ್ಞರು ಕೂಡ ಕಾರನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಕಾರಿನ ಗಾಜು ಒಡೆದಿದ್ದು ರಕ್ತದ ಕಲೆಗಳು ಕೂಡ ಪತ್ತೆಯಾಗಿವೆ.

ಚನ್ನಪಟ್ಟಣ ತಾಲೂಕಿನ ಚಕ್ಕೆರೆ ಗ್ರಾಮದ ತೋಟದ ಮನೆಯಿಂದ ಮಹಾದೇವಯ್ಯ ಅವರು ನಾಪತ್ತೆಯಾಗಿದ್ದರು. ಮನೆಯಲ್ಲಿ ವಸ್ತುಗಳು ಚೆಲ್ಲಾಪಿಲ್ಲಿಯಾಗಿದ್ದರಿಂದ, ಅವರನ್ನು ಅಪಹರಿಸಿರುವ ಅನುಮಾನ ಬಲವಾಗಿ ವ್ಯಕ್ತವಾಗಿದೆ. ಪ್ರಕರಣ ಬೇಧಿಸಲು ಐದು ತಂಡಗಳನ್ನು ರಚಿಸಲಾಗಿದೆ. ಸದ್ಯ ಅವರ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಪ್ರಕರಣವು ದಿನದಿಂದ ದಿನಕ್ಕೆ ಒಂದೊಂದು ತಿರುವು ಪಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.