ADVERTISEMENT

ಬಾಂಗ್ಲಾದೇಶದಲ್ಲಿ ಮೋದಿ ವಿರೋಧಿ ಪ್ರತಿಭಟನೆ: ಬಿಜಿಬಿ ಪಡೆ ನಿಯೋಜಿಸಿದ ಸರ್ಕಾರ

ಹಿಂಸಾಚಾರ ನಿಯಂತ್ರಣಕ್ಕಾಗಿ ಭದ್ರತೆ ಹೆಚ್ಚಳ, ಫೇಸ್‌ಬುಕ್‌ ಜಾಲತಾಣಕ್ಕೂ ನಿರ್ಬಂಧ

ಏಜೆನ್ಸೀಸ್
Published 27 ಮಾರ್ಚ್ 2021, 8:12 IST
Last Updated 27 ಮಾರ್ಚ್ 2021, 8:12 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಢಾಕಾ: ಪ್ರಧಾನಿ ನರೇಂದ್ರ ಮೋದಿ ಅವರ ಬಾಂಗ್ಲಾದೇಶ ಪ್ರವಾಸ ವಿರೋಧಿಸಿ ಇಸ್ಲಾಂ ಮೂಲ ಭೂತವಾದಿಗಳು ಶುಕ್ರವಾರ ನಡೆಸಿದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದರಿಂದ ಕಾನೂನು–ಸುವ್ಯವಸ್ಥೆ ಕಾಪಾಡುವ ಸಲುವಾಗಿ ದೇಶದಾದ್ಯಂತ ಭದ್ರತೆಯನ್ನು ಹೆಚ್ಚಿಸಲಾಗಿದೆ.

ರಾಜಧಾನಿ ಢಾಕಾದ ಪ್ರಮುಖ ಮಸೀದಿ ಪ್ರದೇಶದಲ್ಲಿ ಶುಕ್ರವಾರ ಹಿಂಸಾಚಾರ ನಡೆದಿತ್ತು. ಈ ಘಟನೆಯಲ್ಲಿ ಐವರು ಸಾವಿಗೀಡಾಗಿದ್ದರು.

ದೇಶದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಶುಕ್ರವಾರ ರಾತ್ರಿಯಿಂದಲೇ ಬಾರ್ಡರ್‌ ಗಾರ್ಡ್ಸ್‌ ಬಾಂಗ್ಲಾದೇಶ್ (ಬಿಜಿಬಿ) ಪಡೆಗಳನ್ನು ದೇಶದ ವಿವಿಧೆಡೆ ನಿಯೋಜಿಸಲಾಗಿದೆ ಎಂದು ಬಿಜಿಬಿ ವಕ್ತಾರರು ತಿಳಿಸಿದ್ದಾರೆ.

ADVERTISEMENT

ಹಿಂಸಾಚಾರದ ಚಿತ್ರಗಳು ಮತ್ತು ವರದಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳಲು ಆರಂಭವಾಗುತ್ತಿದ್ದಂತೆ ಶುಕ್ರವಾರ ಮಧ್ಯಾಹ್ನದಿಂದ ದೇಶದಾದ್ಯಂತ ಫೇಸ್‌ಬುಕ್‌ ಅನ್ನು ನಿರ್ಬಂಧಿಸಲಾಯಿತು ಎಂದು ಕಂಪನಿಯ ವಕ್ತಾರರು ತಿಳಿಸಿದರು.

‘ಗೃಹ ಸಚಿವಾಲಯದ ಸೂಚನೆ ಮತ್ತು ಸರ್ಕಾರದ ನೆರವಿನೊಂದಿಗೆ, ದೇಶದ ವಿವಿಧ ಜಿಲ್ಲೆಗಳಲ್ಲಿ ಅಗತ್ಯ ಸಂಖ್ಯೆಯ ಬಿಜಿಬಿಯನ್ನು ನಿಯೋಜಿಸಲಾಗಿದೆ‘ ಎಂದು ಲೆಫ್ಟಿನೆಂಟ್ ಕರ್ನಲ್ ಫೇಜೂರ್ ರಹಮಾನ್ ಸುದ್ದಿ ಸಂಸ್ಥೆಗೆ ತಿಳಿಸಿದರು. ಬಿಜಿಪಿ ನಿಯೋಜನೆಯ ನಂತರ ದೇಶದಲ್ಲಿ ಯಾವುದೇ ಹಿಂಸಾಚಾರ ನಡೆದ ವರದಿಗಳು ಬಂದಿಲ್ಲ. ಪರಿಸ್ಥಿತಿ ನಿಯಂತ್ರಣದಲ್ಲಿದೆ‘ ಎಂದು ರಹಮಾನ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.