ADVERTISEMENT

ಬಾಂಗ್ಲಾದೇಶದಲ್ಲಿ ದೋಣಿ ದುರಂತ: ಮೃತರ ಸಂಖ್ಯೆ 61ಕ್ಕೆ ಏರಿಕೆ

ಐಎಎನ್ಎಸ್
Published 27 ಸೆಪ್ಟೆಂಬರ್ 2022, 10:10 IST
Last Updated 27 ಸೆಪ್ಟೆಂಬರ್ 2022, 10:10 IST
ದೋಣಿ ದುರಂತ ಸಂಭವಿಸಿದ ನದಿಯ ದಂಡೆಯಲ್ಲಿ ಆತಂಕದಿಂದ ಸೇರಿದ್ದ ಜನರು
ದೋಣಿ ದುರಂತ ಸಂಭವಿಸಿದ ನದಿಯ ದಂಡೆಯಲ್ಲಿ ಆತಂಕದಿಂದ ಸೇರಿದ್ದ ಜನರು   

ಢಾಕಾ:ಬಾಂಗ್ಲಾದೇಶದ ವಾಯವ್ಯ ಭಾಗದ ಪಂಚಗಡ ಜಿಲ್ಲೆಯ ಕೊರೊಟೊ ನದಿಯಲ್ಲಿ ಭಾನುವಾರ ಸಂಭವಿಸಿದ ದೋಣಿ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 61ಕ್ಕೆ ಏರಿಕೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಜಧಾನಿ ಢಾಕಾದಿಂದ 468 ಕಿ.ಮೀ ದೂರದಲ್ಲಿರುವಪಂಚಗಡ ಜಿಲ್ಲೆಯಲ್ಲಿ ಹರಿಯುವ ಈ ನದಿಯ ವಿವಿಧ ಜಾಗಗಳಲ್ಲಿ ಶವಗಳನ್ನು ಮೇಲೆತ್ತಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿರುವುದಾಗಿ ಕ್ಸಿನುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಇನ್ನೂ ಆರು ಜನರುಕಾಣೆಯಾಗಿದ್ದು, ಶೋಧ ಕಾರ್ಯಾಚರಣೆ ಮುಂದುವರಿದಿದೆ.

ADVERTISEMENT

70ಕ್ಕೂ ಹೆಚ್ಚು ಜನರನ್ನು ಕರೆದೊಯ್ಯುತ್ತಿದ್ದ ದೋಣಿ ಭಾನುವಾರ ಮಗುಚಿತ್ತು ಎಂದುಪಂಚಗಡ ಜಿಲ್ಲೆಯ ಸೂಪರಿಂಟೆಂಡೆಂಟ್‌ ಎಸ್‌.ಎಂ. ಸಿರಾಜುಲ್‌ ಹೂಡಾ ಮಾಹಿತಿ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.