ಲಾಹೋರ್: ‘ದುಷ್ಕರ್ಮಿಗಳು ತಮ್ಮ ಬಲಗಾಲಿಗೆ ನಾಲ್ಕು ಬಾರಿ ಗುಂಡು ಹಾರಿಸಿದ್ದಾರೆ’ ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಶುಕ್ರವಾರ ತಿಳಿಸಿದರು.
ಹತ್ಯೆ ಯತ್ನ ನಡೆದ ನಂತರ ಮೊದಲ ಬಾರಿಗೆ ದೇಶವನ್ನು ಉದ್ದೇಶಿಸಿ ಆಸ್ಪತ್ರೆಯಿಂದಲೇ ಮಾತನಾಡಿದ ಅವರು, ‘ಹತ್ಯೆಯ ಸಂಚಿನ ಬಗ್ಗೆ ನನಗೆ ಮೊದಲೇ ಅರಿವಿತ್ತು’ ಎಂದು ತಿಳಿಸಿದರು.
‘ದಾಳಿಯ ವಿವರವನ್ನು ನಂತರ ನೀಡುತ್ತೇನೆ. ವಾಜೀರಾಬಾದ್ನಲ್ಲಿ ನನ್ನನ್ನು ಕೊಲ್ಲಲುಅವರು ಯೋಜಿಸಿದ್ದರು ಎಂಬುದು ದಾಳಿಯ ಹಿಂದಿನ ದಿನವೇ ತಿಳಿದಿತ್ತು’ ಎಂದು ತಿಳಿಸಿದ್ದಾರೆ.
‘ಖಾನ್ ಅವರ ಬಲಗಾಲಿನ ಮೂಳೆಗೆ ಹಾನಿಯಾಗಿದೆ’ ಎಂದು ಚಿಕಿತ್ಸೆ ನೀಡುತ್ತಿರುವ ವೈದ್ಯ ಡಾ.ಫೈಸಲ್ ಸುಲ್ತಾನ್ ತಿಳಿಸಿದ್ದಾರೆ.
ಇವನ್ನೂ ಓದಿ...
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.