ADVERTISEMENT

‘ವಿಶ್ವಾಸ, ಗೌರವದ ಮೇಲೆ ಭಾರತ– ಬಾಂಗ್ಲಾ ಸಂಬಂಧ ನಿರ್ಮಾಣ’

ಪಿಟಿಐ
Published 26 ಸೆಪ್ಟೆಂಬರ್ 2020, 11:13 IST
Last Updated 26 ಸೆಪ್ಟೆಂಬರ್ 2020, 11:13 IST
ಮಹಾತ್ಮ ಗಾಂಧೀಜಿ
ಮಹಾತ್ಮ ಗಾಂಧೀಜಿ   

ಢಾಕಾ: ‘ಭಾರತ ಮತ್ತು ಬಾಂಗ್ಲಾದೇಶ ಅಭಿವೃದ್ಧಿಯಲ್ಲಿ ಪಾಲುದಾರರಾಗಿದ್ದು, ಉಭಯ ದೇಶಗಳ ನಡುವಿನಸಂಬಂಧ ಪರಸ್ಪರ ವಿಶ್ವಾಸ ಮತ್ತು ಗೌರವದ ಮೇಲೆ ನಿರ್ಮಾಣವಾಗಿದೆ’ ಎಂದು ಭಾರತದ ರಾಯಭಾರಿ ತಿಳಿಸಿದ್ದಾರೆ.

ಮಹಾತ್ಮ ಗಾಂಧೀಜಿ ಅವರ 150 ನೇ ಜನ್ಮದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ‘ಮಹಾತ್ಮ ಗಾಂಧಿಯ ಸ್ಮರಣೆ’ ಕಾರ್ಯಕ್ರಮದಲ್ಲಿ ಭಾರತದ ಹೈ ಕಮಿಷನರ್‌ ರಿವಾ ಗಂಗೂಲಿ ದಾಸ್‌ ಮಾತನಾಡಿದರು.

‘ವಿಮೋಚನಾ ಯುದ್ಧದ 50 ನೇ ವಾರ್ಷಿಕೋತ್ಸವ ಮತ್ತು ಭಾರತ ಮತ್ತು ಬಾಂಗ್ಲಾದೇಶದ ನಡುವಿನ ರಾಜತಾಂತ್ರಿಕ ಸಂಬಂಧಗಳ 50 ನೇ ವರ್ಷಾಚರಣೆಯ ಜಂಟಿ ಸ್ಮರಣಾರ್ಥಕ್ಕಾಗಿ ಭಾರತ ಎದುರು ನೋಡುತ್ತಿದೆ.ಉಭಯ ದೇಶಗಳ ನಡುವಿನ ಐತಿಹಾಸಿಕ ಸ್ನೇಹ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಲು ಒಟ್ಟಾಗಿ ಕಾರ್ಯಪ್ರವೃತ್ತವಾಗಬೇಕು’ ಎಂದು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.