ಸಿಂಗಪುರ: ದೇಶದಲ್ಲಿ ಕೋವಿಡ್–19 ನಿರ್ವಹಣೆ ಹಾಗೂ ಕೋವಿಡ್ ಲಸಿಕೆ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದ್ದನ್ನು ಪರಿಗಣಿಸಿ, ಭಾರತ ಮೂಲದ ಆರೋಗ್ಯಾಧಿಕಾರಿ ದಿನೇಶ್ ವಾಸು ದಾಸ್ ಎಂಬುವವರನ್ನು ಸಿಂಗಪುರ ಸರ್ಕಾರವು ‘ಪಬ್ಲಿಕ್ ಸರ್ವೀಸ್ ಸ್ಟಾರ್’ ಪ್ರಶಸ್ತಿಗೆ ಆಯ್ಕೆ ಮಾಡಿದೆ.
ಈ ಪ್ರಶಸ್ತಿಗೆ ಆಯ್ಕೆಯಾಗಿರುವುದಕ್ಕೆ ಪ್ರತಿಕ್ರಿಯಿಸಿರುವ ದಿನೇಶ್, ‘ಬದ್ಧತೆ ಹಾಗೂ ವೃತ್ತಿಪರತೆ ಹೊಂದಿದ್ದವರನ್ನು ಒಳಗೊಂಡ ತಂಡ ನನ್ನ ಬೆನ್ನಿಗೆ ಇತ್ತು. ಸಿಂಗಪುರದ ಜನರನ್ನು ಕೋವಿಡ್ ಪಿಡುಗು ಬಾಧಿಸದಂತೆ ತಡೆಯಲು ಇದರಿಂದ ಸಾಧ್ಯವಾಯಿತು’ ಎಂದು ಹೇಳಿದ್ದಾರೆ.
ಈ ಪ್ರಶಸ್ತಿಗೆ ಒಟ್ಟು 32 ಜನರನ್ನು ಆಯ್ಕೆ ಮಾಡಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.