ಜಾಗತಿಕ ಉಗ್ರಗಾಮಿ ಎಂಬ ಹಣೆಪಟ್ಟಿ ಹೊತ್ತ, ಮುಂಬಯಿ ಸರಣಿ ಸ್ಫೋಟದ ರೂವಾರಿ ದಾವೂದ್ ಇಬ್ರಾಹಿಂ ಪಾಕಿಸ್ತಾನದ ಕರಾಚಿಯಲ್ಲಿ ಐಎಸ್ಐ ರಕ್ಷಣೆಯಲ್ಲಿದ್ದಾನೆ ಎಂಬ ಬಗ್ಗೆ ಸಾಕಷ್ಟು ವರದಿಗಳು ಈಗಾಗಲೇ ಇವೆ. ವಿಶ್ವಸಂಸ್ಥೆಯ ಹಣಕಾಸು ನೆರವು ಕೈತಪ್ಪಿಹೋಗುತ್ತದೆಂಬ ಕಾರಣಕ್ಕೆ ಆತನಿಗೂ ನಿಷೇಧ ವಿಧಿಸಿದ್ದೇವೆ ಎಂದು ಹೇಳಿಕೊಂಡ ಪಾಕಿಸ್ತಾನ, ರಾತೋರಾತ್ರಿ ಹೇಳಿಕೆ ಬದಲಿಸಿ, ಆತ ನಮ್ಮ ನೆಲದಲ್ಲಿಲ್ಲ ಎಂದಿದೆ. ಏನಿದು ದಾವೂದ್ - ಪಾಕ್ ನಂಟಿನ ಗಂಟು? ವಿಡಿಯೊ ನೋಡಿ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.