ADVERTISEMENT

ಸಿಂಗಪುರ: ಕೇರಳ ಪರಿಹಾರ ನಿಧಿಗೆ ₹26.53 ಲಕ್ಷ ನೆರವು

ಪಿಟಿಐ
Published 29 ಸೆಪ್ಟೆಂಬರ್ 2018, 19:51 IST
Last Updated 29 ಸೆಪ್ಟೆಂಬರ್ 2018, 19:51 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಸಿಂಗಪುರ: ಇಲ್ಲಿ ನೆಲೆಸಿರುವ ಸುಮಾರು 40 ಸಾವಿರ ಕೇರಳಿಗರು ಮತ್ತು ರೆಡ್‌ ಕ್ರಾಸ್‌ ಸಂಸ್ಥೆ ಜಂಟಿಯಾಗಿ ಕೇರಳ ಪ್ರವಾಹ ಸಂತ್ರಸ್ತರ ಪರಿಹಾರ ನಿಧಿಗೆ ಒಟ್ಟು ₹26.53 ಲಕ್ಷ ನೆರವು ನೀಡಿದ್ದಾರೆ.

‘ಕೇರಳದಲ್ಲಿ ನೆಲೆಸಿರುವ ನಮ್ಮ ಸ್ನೇಹಿತರು ಮತ್ತು ಸಂಬಂಧಿಗಳಿಗೆ ನೆರವಾಗಲು ಹಣ ಸಂಗ್ರಹಿಸಿದ್ದೇವೆ.’ ಎಂದು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಈಶ್ವರನ್‌ ತಿಳಿಸಿದ್ದಾರೆ.

ಹಣ ಸಂಗ್ರಹಕ್ಕಾಗಿ ಶಾಪಿಂಗ್‌ ಮಾಲ್‌ಗಳಲ್ಲಿ ಬೂತ್‌ಗಳನ್ನು ತೆರೆಯಲಾಗಿತ್ತು. ಕೇರಳ ಮೂಲದ ಕಲಾವಿದ ಲಕ್ಷ್ಮೀ ಮೋಹನ್‌ ಬಾಬು ವರ್ಣಚಿತ್ರ ಪ್ರದರ್ಶನದಿಂದ ಬಂದ ₹10.61ಲಕ್ಷ ಹಣವನ್ನು ಪರಿಹಾರ ನಿಧಿಗೆ ನೀಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.