ಸೇಂಟ್ ಕಿಟ್ಸ್: ಪಿವಿಎನ್ ತಿವಾರಿ ಆರೋಪ ಮುಕ್ತಿ
ನವದೆಹಲಿ. ಜೂನ್ 4 (ಪಿಟಿಐ, ಯುಎನ್ಐ) – ಸೇಂಟ್ ಕಿಟ್ಸ್ ವಂಚನೆ ಪ್ರಕರಣದಲ್ಲಿ ಮಾಜಿ ಪ್ರಧಾನಿ ಪಿ.ವಿ. ನರಸಿಂಹ ರಾವ್ ಹಾಗೂ ಮಾಜಿ ಕೇಂದ್ರ ಸಚಿವ ಕೆ.ಕೆ. ತಿವಾರಿಯವರನ್ನು ಆರೋಪದಿಂದ ಮುಕ್ತರನ್ನಾಗಿಸಿರುವ ದೆಹಲಿ ನ್ಯಾಯಾಲಯ ವಿವಾದಿತ ಸಾಧು ಚಂದ್ರ ಸ್ವಾಮಿ ಹಾಗೂ ಆತನ ಆಪ್ತ ಸಹಾಯಕ ಕೈಲಾಶ್ ನಾಥ್ ಅಗರ್ವಾಲ್ಅವರನ್ನು ತಪ್ಪಿತಸ್ಥರೆಂದು ಘೋಷಿಸಿದೆ.
ಭಾರತೀಯ ದಂಡ ಸಂಹಿತೆ ಸೆಕ್ಷನ್ 195 (ಸುಳ್ಳು ಸಾಕ್ಷ್ಯ ನೀಡಿಕೆ), 120 (ಬಿ) (ಪಿತೂರಿ) ಹಾಗೂ 469 (ಘನತೆಗೆ ಚ್ಯುತಿ ತರಲು ವಂಚನೆ) ಅನ್ವಯ ಚಂದ್ರಸ್ವಾಮಿ ಹಾಗೂ ಕೈಲಾಶ್ನಾಥ್ ಅವರ ವಿರುದ್ಧ ಈ ತೀರ್ಪು ನೀಡಿದರು. ನಮಥರ ಈ ಪ್ರಕರಣದ ವಿಚಾರಣೆಯನ್ನು ಜುಲೈ 3 ಕ್ಕೆ ಮುಂದೂಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.