ರಾವ್– ಕೇಸರಿ ಸಮರಕ್ಕೆ ತಿರುವು
ನವದೆಹಲಿ, ನ. 26 (ಯುಎನ್ಐ, ಪಿಟಿಐ)– ಡಿಸೆಂಬರ್ 10ರಂದು ನಡೆಯಲಿರುವ ಕಾಂಗ್ರೆಸ್ ಸಂಸದೀಯ ಪಕ್ಷದ ಚುನಾವಣೆ ಯನ್ನು ಮುಂದೂಡುವಂತೆ ಕೆಲವರು ಒತ್ತಡ ಹೇರುತ್ತಿರುವುದರ ಬೆನ್ನಲ್ಲೇ
ಪಿ.ವಿ.ನರಸಿಂಹ ರಾವ್ ಅವರ ಬೆಂಬಲಿಗರು ಅಂದೇ ಚುನಾವಣೆ ನಡೆಸಲು ಸಜ್ಜಾಗುತ್ತಿದ್ದು ಪಕ್ಷದ ಅಧ್ಯಕ್ಷ ಸೀತಾರಾಂ ಕೇಸರಿ ಹಾಗೂ ರಾವ್ ನಡುವಿನ ಶೀತಲ ಸಮರ ಹೊಸ ತಿರುವು ಪಡೆದುಕೊಂಡಿದೆ.
ಕೇಸರಿಯವರನ್ನು ಕಡೆಗಣಿಸಿ ಈ ಚುನಾವಣೆ ನಡೆಸಲು ಯತ್ನಿಸುತ್ತಿರುವುದರಿಂದ ಚುನಾವಣೆಯನ್ನು ರದ್ದುಪಡಿಸಬೇಕು ಎಂದು ಪಕ್ಷದ ಕೆಲವರು ಪಟ್ಟು ಹಿಡಿದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.