ಅರ್ಥಶಾಖೆಯಲ್ಲಿ ಪ್ರಧಾನಿಗೆ ಚಿನ್ನದ ತಾಯತ ನೀಡಿದರೆ?
ನವದೆಹಲಿ, ಏ. 6– ಅಕ್ರಮ ಸಾಗಾಣಿಕೆ ಸಂಬಂಧದಲ್ಲಿ ಹಣಕಾಸು ಶಾಖೆಯಲ್ಲಿರುವ ಹಿಂದಿ ಅಧಿಕಾರಿ ವಿರುದ್ಧ ಮಾಡಿರುವ ಆರೋಪ ಕುರಿತು ವಿಚಾರಣೆ ನಡೆಸುವುದಾಗಿ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಇಂದು ಲೋಕಸಭೆಗೆ ತಿಳಿಸಿದರು.
ಪ್ರಧಾನಿಗೆ ಈ ಅಧಿಕಾರಿಯು ಚಿನ್ನದ ತಾಯತವೊಂದನ್ನು ಕೊಟ್ಟಿದ್ದಾರೆ. ಹೀಗಾಗಿ, ಅಕ್ರಮ ಸಾಗಾಣಿಕೆ ಸಂಬಂಧದಲ್ಲಿ ವಿದೇಶಿಯನೊಬ್ಬನೊಡನೆ ಸಂಪರ್ಕ ಹೊಂದಿರುವ ಅವರ ವಿರುದ್ಧ ಸರ್ಕಾರ ಕ್ರಮ ತೆಗೆದುಕೊಂಡಿಲ್ಲವೆಂಬ ಆರೋಪವನ್ನು ಹಣಕಾಸು ಶಾಖೆಯ ಸ್ಟೇಟ್ ಸಚಿವ ಶ್ರೀ ಪಿ.ಸಿ.ಸೇಠಿ ನಿರಾಕರಿಸಿದರು.
ಸಚಿವರಾರಿಗೂ ಅವರು ಯಾವುದೇ ತಾಯತ ಕೊಟ್ಟಿಲ್ಲವೆಂದು ತಿಳಿಸಿದರು.
ನಿರುದ್ಯೋಗದ ವಿರುದ್ಧ ಎಸ್ಸೆಸ್ಪಿ ಪ್ರದರ್ಶನ: ಹಲವರಿಗೆ ಪೆಟ್ಟು
ನವದೆಹಲಿ, ಏ. 6– ಸಾಲುಗಟ್ಟಿ ನಿಂತಿದ್ದ ಪೊಲೀಸರ ವ್ಯೂಹ ಭೇದಿಸಿಕೊಂಡು ಸಂಸತ್ ಭವನದತ್ತ ನುಗ್ಗಲು ಪ್ರಯತ್ನಿಸಿದ ಸಂಯುಕ್ತ ಸಮಾಜವಾದಿ ಪಕ್ಷದ ಉದ್ರಿಕ್ತ ಪ್ರದರ್ಶನಕಾರರನ್ನು ಚದುರಿಸಲು ಪೊಲೀಸರು ಇಂದು ಇಲ್ಲಿ ಲಾಠಿಪ್ರಹಾರ ಮಾಡಿ ನಂತರ ಸುಮಾರು ಇಪ್ಪತ್ನಾಲ್ಕು ಅಶ್ರುವಾಯು ಷೆಲ್ಗಳನ್ನು ಹಾರಿಸಿದರು.
ಬೆತ್ತದ ಪ್ರಹಾರ ಮಾಡಿದಾಗ ಸಂಯುಕ್ತ ಸೋಷಲಿಸ್ಟ್ ನಾಯಕ, ಸಂಸತ್ ಸದಸ್ಯರಾದ ಜಾರ್ಜ್ ಫರ್ನಾಂಡಿಸ್, ಮಧುಲಿಮಯೆ, ಎಸ್ಸೆಸ್ಪಿ ಅಧ್ಯಕ್ಷ ಕರ್ಪೂರಿ ಠಾಕೂರ್ ಅವರೂ ಸೇರಿ ಐವತ್ತು ಜನಕ್ಕೆ ಗಾಯವಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.