ADVERTISEMENT

50 ವರ್ಷಗಳ ಹಿಂದೆ | ಭಾನುವಾರ 3, ಮೇ 1970

​ಪ್ರಜಾವಾಣಿ ವಾರ್ತೆ
Published 2 ಮೇ 2020, 21:11 IST
Last Updated 2 ಮೇ 2020, 21:11 IST

ಗಡಿ ಪ್ರಶ್ನೆ: 15 ದಿನಗಳಲ್ಲಿ ಅಹ್ಮದ್‌–ಸ್ವರಣ್‌ಸಿಂಗ್‌ರ ಹೊಸ ಸೂತ್ರ ಸಲ್ಲಿಕೆ?

ಮುಂಬಯಿ, ಮೇ 2– ಮೈಸೂರು ಮಹಾರಾಷ್ಟ್ರ ಗಡಿ ವಿವಾದದ ಬಗ್ಗೆ ಕೇಂದ್ರ ಸಚಿವರಾದ ಫಕ್ರುದ್ದಿನ್‌ ಅಲಿ ಅಹ್ಮದ್‌ ಮತ್ತು ಸ್ವರಣ್‌ ಸಿಂಗ್‌ ಅವರು ಇನ್ನು ಹದಿನೈದು ದಿನದೊಳಗೆ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿಯವರಿಗೆ ಹೊಸ ಸಲಹೆ, ಸೂಚನೆಗಳನ್ನು ಸಲ್ಲಿಸುವರು.

ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್‌ ಸಮಿತಿ ನಿಕಟ ಮೂಲಗಳು ಈ ತೀತಿ ಅಭಿಪ್ರಾಯ ಪಟ್ಟಿವೆ. ಮೈಸೂರು–ಮಹಾರಾಷ್ಟ್ರ ಗಡಿ ವಿವಾದ ಅಧ್ಯಯನಕ್ಕಾಗಿ ಶ್ರೀಮತಿ ಗಾಂಧಿಯವರಿಂದ ನೇಮಕಗೊಂಡಿರುವ ಕೇಂದ್ರ ಸಚಿವರುಗಳಾದ ಫಕ್ರುದ್ದಿನ್‌ ಅಲಿ ಅಹ್ಮದ್‌ ಮತ್ತು ಸ್ವರಣ್‌ಸಿಂಗ್‌ ಅವರು ಇಂದು ಬೆಳಿಗ್ಗೆ ಬೆಂಗಳೂರಿಗೆ ತೆರಳುವುದಕ್ಕೆ ಮುಂಚೆ ಇಲ್ಲಿನ ಹಿರಿಯ ಕಾಂಗ್ರೆಸ್ಸಿಗರೊಡನೆ ಮಾತುಕತೆ ನಡೆಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.