ADVERTISEMENT

25 ವರ್ಷಗಳ ಹಿಂದೆ | ಕೊಪ್ಪಳ: ರೈತರ ಆಕ್ರೋಶ; ಜೀಪಿಗೆ ಬೆಂಕಿ, ಲಾಠಿ ಪ್ರಹಾರ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2025, 23:30 IST
Last Updated 30 ಅಕ್ಟೋಬರ್ 2025, 23:30 IST
   

ಕೊಪ್ಪಳ, ಅ. 30– ಬೆಂಬಲ ಬೆಲೆಯಲ್ಲಿ ಮೆಕ್ಕೆಜೋಳ ಖರೀದಿ ಮಾಡುವ ವಿಚಾರದಲ್ಲಿ ರೈತರು ಹಾಗೂ ಅಧಿಕಾರಿಗಳ ನಡುವೆ ನಡೆದ ಮಾತುಕತೆ ವಿಫಲಗೊಂಡಾಗ ರೊಚ್ಚಿಗೆದ್ದು, ಸರ್ಕಾರಿ ಜೀಪಿಗೆ ಬೆಂಕಿ ಇಟ್ಟು ದಾಖಲೆ ಸುಟ್ಟ ಭಾರೀ ಸಂಖ್ಯೆಯ ರೈತರನ್ನು ನಿಯಂತ್ರಿಸುವು ದಕ್ಕಾಗಿ ಪೊಲೀಸರು ಇಲ್ಲಿ ಇಂದು ಲಾಠಿ ಪ್ರಹಾರ ಮಾಡಿ ಅಶ್ರುವಾಯು ಪ್ರಯೋಗಿಸಿದರು.

ಸರ್ಕಾರದ ನೀತಿ ವಿರುದ್ಧ ಆಕ್ರೋಶ ತಾಳಿದ ರೈತರು, ತಹಶೀಲ್ದಾರ್ ಜೀಪಿಗೆ ಬೆಂಕಿ ಹಚ್ಚಿ ಅದನ್ನು ಭಸ್ಮ ಮಾಡಿದ್ದೇ ಅಲ್ಲದೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ (ಎಪಿಎಂಸಿ) ದಾಖಲೆ, ಪೀಠೋಪಕರಣಗಳಿಗೆ ಬೆಂಕಿ ಹಚ್ಚಿ ನಾಶಗೊಳಿಸಿದಾಗ ಪೊಲೀಸರು ನಿಯಂತ್ರಣ ಕ್ರಮವಾಗಿ ಲಾಠಿ, ಅಶ್ರುವಾಯುವಿನಂಥ ಬಲಪ್ರಯೋಗ ಮಾಡಿದರು. 

ಕ್ರಿಕೆಟ್ ಮೋಸದಾಟ: ಸಿಬಿಐನಿಂದ ವರದಿ ಸಲ್ಲಿಕೆ

ADVERTISEMENT

ನವದೆಹಲಿ, ಅ. 30– ಕ್ರಿಕೆಟ್‌ನಲ್ಲಿನ ಮೋಸದಾಟ ಕುರಿತು ಆರು ತಿಂಗಳ ಕಾಲ ವಿಚಾರಣೆ ನಡೆಸಿದ ಕೇಂದ್ರೀಯ ತನಿಖಾ ಆಯೋಗವು (ಸಿಬಿಐ), ತನ್ನ ವರದಿಯನ್ನು ಇಂದು ಕೇಂದ್ರ ಕ್ರೀಡಾ ಸಚಿವ ಸುಖದೇವ್‌ ಧಿಂಡ್ಸಾ ಅವರಿಗೆ ಸಲ್ಲಿಸಿತು.