ಷರತ್ತಿನ ಮೇಲೆ ತಮಿಳುನಾಡಿಗೆ ನೀರು
ಬೆಂಗಳೂರು, ಜ. 3– ಎರಡು ದಿನಗಳ ಸುದೀರ್ಘ ವಿಭಿನ್ನ ರೀತಿಯ ಕಾವೇರಿದ ವಾದ ವಿವಾದ ಹಾಗೂ ವಿಚಾರ ಮಂಥನದ ನಂತರ ಪ್ರಧಾನಿ ಸೂಚನೆಗೆ ಅನುಗುಣವಾಗಿ ತಮಿಳುನಾಡಿಗೆ 6 ಟಿಎಂಸಿ ಅಡಿ ನೀರು ಬಿಡಲು ಮುಖ್ಯಮಂತ್ರಿ ಎಚ್.ಡಿ.ದೇವೇಗೌಡ ಅವರ ನೇತೃತ್ವದಲ್ಲಿ ಸೇರಿದ್ದ ಸರ್ವಪಕ್ಷಗಳ ಸಭೆ ಇಂದು ಇಲ್ಲಿ ತೀರ್ಮಾನಿಸಿತು.
ಕೇಂದ್ರ ಸರ್ಕಾರ ರಾಷ್ಟ್ರೀಯ ಜಲ ನೀತಿಗೆ ಮಾರ್ಗಸೂಚಿ ಪ್ರಕಟಿಸುವವರೆಗೆ ಕಾವೇರಿ ಜಲ ವಿವಾದ ನ್ಯಾಯಮಂಡಲಿ ಮುಂದೆ ಭಾಗವಹಿಸದಿರಲು ಸಭೆ ನಿರ್ಧರಿಸಿತು.
ಜೆ.ಎಚ್.ಪಟೇಲ್ ಆಯ್ಕೆ ರದ್ದು
ಬೆಂಗಳೂರು, ಜ. 3– ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಇಚ್ಛಿಸಿದ್ದ ಅಭ್ಯರ್ಥಿಯೊಬ್ಬರ ನಾಮಪತ್ರವನ್ನು ನಿರಾಕರಿಸಿದುದು ತಪ್ಪು ಎಂಬ ಕಾರಣದ ಮೇಲೆ ಶಿವಮೊಗ್ಗ ಜಿಲ್ಲೆ ಚನ್ನಗಿರಿ ಕ್ಷೇತ್ರದ ಚುನಾವಣೆಯನ್ನು ಹೈಕೋರ್ಟ್ ಇಂದು ರದ್ದುಗೊಳಿಸಿತು.
ಇದರಿಂದಾಗಿ ಆ ಕ್ಷೇತ್ರದಿಂದ ಗೆದ್ದಿದ್ದ ಉಪಮುಖ್ಯಮಂತ್ರಿ ಜೆ.ಎಚ್.ಪಟೇಲ್ ಅವರ ಆಯ್ಕೆ ರದ್ದಾಗಿದೆ.
ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಲು ಅವಕಾಶವಾಗುವಂತೆ ತೀರ್ಪಿನ ಜಾರಿಗೆ ನಾಲ್ಕು ವಾರಗಳ ಅವಧಿಗೆ ತಡೆ ನೀಡಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.