
ಪ್ರಜಾವಾಣಿ ವಿಶೇಷ
ನವದೆಹಲಿ, ಫೆ.6– ಭಾರತ ಸರ್ಕಾರದ ಮಟ್ಟಿಗೆ ಹೇಳುವುದಾದರೆ ಲಂಡನ್ನಿನಲ್ಲಿ ನಡೆದ ಕಾಮನ್ವೆಲ್ತ್ ಪ್ರಧಾನಿಗಳ ಸಮ್ಮೇಳನದ ಶಾಂತಿ ಧೋರಣೆಯನ್ನೇ ತಾವು ಪೂರ್ತಿ ಪಾಲಿಸಿಕೊಂಡು ಬರಲು ಪ್ರಯತ್ನಿಸುವುದಾಗಿ ಪ್ರಧಾನಿ ಪಂಡಿತ ನೆಹರೂ ಅವರು ಇಂದು ಪಾರ್ಲಿಮೆಂಟಿನಲ್ಲಿ ತಿಳಿಸಿದರು.
ಇತ್ತೀಚಿಗೆ ನಡೆದ ಕಾಮನ್ವೆಲ್ತ್ ಪ್ರಧಾನಿಗಳ ಸಮ್ಮೇಳನದ ಬಗ್ಗೆ ಹಾಗೂ ಅಲ್ಲಿ ಚರ್ಚಿತವಾದ ಪ್ರಶ್ನೆಗಳ ಕುರಿತು ಶ್ರೀ ಉಪೇಂದ್ರನಾಥ ಬರ್ಮನ್ ಅವರು ಕೇಳಿದ ಪ್ರಶ್ನೆಗೆ ಉತ್ತರವೀಯುತ್ತ ನೆಹರೂ ಮೇಲ್ಕಂಡಂತೆ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.