ADVERTISEMENT

ತಿಮಿಂಗಿಲಗಳು

ಸತ್ಯ, ಬೆಂಗಳೂರು
Published 23 ಮಾರ್ಚ್ 2014, 19:30 IST
Last Updated 23 ಮಾರ್ಚ್ 2014, 19:30 IST

ಯಾವುದೇ ಸರ್ಕಾರಿ ಹುದ್ದೆಗೆ ಕನಿಷ್ಠ ಪಕ್ಷ ಹತ್ತನೇ ತರಗತಿ ಓದಿರಬೇಕು, ಉದ್ಯೋಗ ಆಕಾಂಕ್ಷಿಗಳ ಮೇಲೆ ಯಾವುದೇ ಕ್ರಿಮಿನಲ್ ಮೊಕದ್ದಮೆ ದಾಖ­ಲಾಗಿರ­ಬಾರದು, ಆದರೆ ಚುನಾವಣೆಗೆ ಸ್ಪರ್ಧಿಸುವ ಅಭ್ಯ­ರ್ಥಿ­ಗಳಿಗೆ ಇದ್ಯಾವುದೂ ಅನ್ವಯಿಸುವುದಿಲ್ಲ.

ಅಂದರೆ ಕ್ರಿಮಿನಲ್‌ಗಳು, ಅಜ್ಞಾನಿ­ಗಳೂ ಜನರನ್ನು ಆಳಬಹುದು ಎಂದರ್ಥ ಅಲ್ಲವೇ?
ಈಗಿನ ರಾಜಕಾರಣಿಗಳು ಯಾರೂ ಅಮಾ­­ಯ­ಕರು, ಅಜ್ಞಾನಿಗಳು ಅಲ್ಲವೇ ಅಲ್ಲ. ಅವಕಾಶ ಸಿಕ್ಕರೆ ದೇಶವನ್ನೇ ಕಬಳಿಸುವ ತಿಮಿಂಗಿಲ­ಗಳೆನ್ನಬಹುದೇನೋ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.