ಎಂ.ಇ.ಎಸ್ ಹಾಗೂ ಶಿವಸೇನಾವು ಬೆಳಗಾವಿಯಲ್ಲಿ ತಮ್ಮ ಪುಂಡಾಟವನ್ನು ಮುಂದುವರಿಸಿ, ಕನ್ನಡ ಧ್ವಜವನ್ನು ಸುಟ್ಟು ಹಾಕುವ ಹೀನ ಕೆಲಸಕ್ಕೆ ಕೈಹಾಕಿರುವುದು ಖಂಡನೀಯ.
ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು, ಮಹಾರಾಷ್ಟ್ರದ ಜನರ ಗಮನ ಸೆಳೆಯಲು ಈ ರಾಜಕೀಯ ನಾಯಕರು ಪದೇ ಪದೇ ಇಂತಹ ಕೆಲಸಕ್ಕೆ ಕೈ ಹಾಕುತ್ತಲೇ ಇರುತ್ತಾರೆ. ಕನ್ನಡದ ಅಸ್ಮಿತೆಗೆ ಧಕ್ಕೆಯುಂಟು ಮಾಡುವಂತಹ ಉದ್ಧಟತನದ ಹೇಳಿಕೆ ನೀಡುವುದನ್ನು ಈ ನಾಯಕರು ಬಿಡಬೇಕು, ಕಿಡಿಗೇಡಿ ಕೃತ್ಯಗಳನ್ನು ನಿಲ್ಲಿಸಬೇಕು.
ಗಡಿ ವಿವಾದವು ಸುಪ್ರೀಂ ಕೋರ್ಟ್ನಲ್ಲಿ ಇರುವುದರಿಂದ, ಈ ಕುರಿತು ವಿವಾದಿತ ಹೇಳಿಕೆಗಳನ್ನು ನೀಡಬಾರದೆನ್ನುವ ಕನಿಷ್ಠ ಜ್ಞಾನವೂ ಇವರಿಗೆ ಇಲ್ಲದಿರುವುದು ವಿಷಾದನೀಯ.
–ಮಧು ಕೆ.,ಕೊಟ್ಟೂರು, ಬಳ್ಳಾರಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.