ADVERTISEMENT

ಅವಸರದ ತೀರ್ಮಾನ: ಅಂದೂ ಇಂದೂ

​ಪ್ರಜಾವಾಣಿ ವಾರ್ತೆ
Published 4 ಜೂನ್ 2020, 20:00 IST
Last Updated 4 ಜೂನ್ 2020, 20:00 IST

‘ಅನಗತ್ಯಅವಸರದಕಾರಣದಿಂದ ಭಾರತದಲ್ಲಿಶಿಕ್ಷಣವ್ಯವಸ್ಥೆಗೆಪೆಟ್ಟು ಬಿದ್ದಿದೆ’ ಎಂದು ಐದು ದಶಕಗಳ ಹಿಂದೆ ಕೇಂದ್ರದ ಅಂದಿನ ಶಿಕ್ಷಣಸಚಿವ ಡಾ.ವಿ.ಕೆ.ಆರ್.ವಿ.ರಾವ್ ಹೇಳಿದ್ದರು(ಪ್ರ.ವಾ., 50 ವರ್ಷಗಳ ಹಿಂದೆ, ಜೂನ್‌ 3). ಈಹೇಳಿಕೆ ಇಂದಿಗೂ ಪ್ರಸ್ತುತವಾಗಿದೆ.ಶಿಕ್ಷಣ ಕ್ಷೇತ್ರದಲ್ಲಿ ಬಹಳಷ್ಟು ಸಾಧನೆಗಳಾಗಿದ್ದರೂ ಹಲವಾರುವಿಷಯಗಳಲ್ಲಿ ನಾವು ಎಡವುತ್ತಿರುವುದು ಅವಸರದ ತೀರ್ಮಾನಗಳ ಕಾರಣಕ್ಕೇ.ಮುಂದಾಲೋಚನೆಇಲ್ಲದೆ ತೆಗೆದುಕೊಂಡಎಷ್ಟೋ ತೀರ್ಮಾನಗಳು ಶಿಕ್ಷಣ ಗುಣಮಟ್ಟದ ಸುಧಾರಣೆಗೆ ಅಂಕುಶಹಾಕಿದಂತಾಗುತ್ತವೆ.

ಪ್ರಸ್ತುತ ರಾಜ್ಯದಲ್ಲಿ ಶಾಲೆಗಳ ಪುನರಾರಂಭದ ಬಗ್ಗೆಯೂ ಸರ್ಕಾರ ಯಾವುದೇ ಅವಸರದ ತೀರ್ಮಾನ ಕೈಗೊಳ್ಳದೆ, ಮಕ್ಕಳ ಆರೋಗ್ಯ ಹಾಗೂ ಭವಿಷ್ಯವನ್ನು ಗಮನದಲ್ಲಿಟ್ಟು ಸೂಕ್ತ ನಿರ್ಧಾರ ಕೈಗೊಳ್ಳಬೇಕು.

–ಕಡೂರುಫಣಿಶಂಕರ್,ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.