ವೃದ್ಧರ ಮನೆ ಬಾಗಿಲಿಗೆ ಪಿಂಚಣಿ ತಲುಪಿಸುವ ಯೋಜನೆ ಜಾರಿಯಾಗಲಿರುವುದಾಗಿ ಸಚಿವ ಆರ್.ಅಶೋಕ ಹೇಳಿದ್ದಾರೆ (ಪ್ರ.ವಾ., ಡಿ. 11). ‘60ಕ್ಕೆ ಅಲೆದಾಟ’ ಎಂಬಂತೆ, ವೃದ್ಧರು ಎಂದರೆ ಮೂಗು ಮುರಿಯುವ ಜನರಿದ್ದಾರೆ. ಕೆಲವು ಹಿರಿಯ ನಾಗರಿಕರಂತೂ ಪಿಂಚಣಿಗಾಗಿ ತಾಲ್ಲೂಕು ಖಜಾನೆಗೆ ಸುತ್ತಿ ಸುತ್ತಿ ಸಾಕಾಗಿರುವುದೂ ಉಂಟು. ಇಂತಹವರ ನಡುವೆ, ಈ ಯೋಜನೆ ಸಮರ್ಪಕವಾಗಿ ಜಾರಿಗೆ ಬಂದರೆ ಪಿಂಚಣಿದಾರರಿಗೆ ಅನುಕೂಲವಾಗುತ್ತದೆ.
-ಕುಣಿಗಲ್ ಜಯಣ್ಣ,ಗಿಡದ ಕೆಂಚನಹಳ್ಳಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.